ಗುಣಮಟ್ಟ, ಅಧಿಕ ಮೈಲೇಜ್ ಗುರಿಯಾಗಿಟ್ಟುಕೊಂಡು ಪುತ್ತೂರಿನಲ್ಲಿ ತಿರುಮಲ ಪ್ಯೂಯಲ್ಸ್ ಶುಭಾರಂಭ

0

ಗುಣಮಟ್ಟದ ಇಂಧನ, ಗ್ರಾಹಕರ ಸೇವೆ ವಿಶೇಷತೆ – ಶೆಲ್ ಇಂಡಿಯಾದ ಮೊಹ್‌ಶಿನ್

ಪುತ್ತೂರು: ಇಂಧನದಲ್ಲಿ ಗುಣಮಟ್ಟ ಮತ್ತು ವಾಹನಗಳ ಅಧಿಕ ಮೈಲೇಜ್‌ಗಳನ್ನು ಗುರಿಯಾಗಿರಿಸಿಕೊಂಡು ತಿರುಮಲ ಮೋಟಾರ‍್ಸ್‌ನಿಂದ ಬೊಳುವಾರು ಬೈಪಾಸ್‌ನಲ್ಲಿ ಶೆಲ್ ಇಂಡಿಯಾದ ತಿರುಮಲ ಪ್ಯೂಯೆಲ್ಸ್ ಡಿ.25ರಂದು ಬೆಳಿಗ್ಗೆ ಉದ್ಘಾಟನೆಗೊಂಡಿತು.


ತಿರುಮಲ ಪ್ಯೂಯಲ್ಸ್ ಅನ್ನು ಡಾ. ಎಮ್.ಎಸ್ ಭಟ್ ಅವರು ಉದ್ಘಾಟಸಿದರು. ಬಳಿಕ ರಾಮ್ ಭಟ್ ಬಂಗಾರಡ್ಕ, ಉದ್ಯಮಿ ವಿ.ಕೆ.ಜೈನ್, ಸಂಸ್ಥೆಯ ಮಾಲಕ ಕೃಷ್ಣಕಿಶೋರ್ ಅವರ ಅಣ್ಣ ರಾಜಗೋಪಾಲ್ ಅವರು ಇಂಧನ ಚಾಲನಾ ಯಂತ್ರಗಳನ್ನು ಉದ್ಘಾಟಿಸಿದರು. ಕೃಷ್ಣಕಿಶೋರ್ ಅವರ ಮೊಮ್ಮಗಳಾದ ಬೇಬಿ ಕೃಷಾ ಅವರು ಶೆಲ್ ಸೆಲೆಕ್ಟ್ (ಕೆಫೆ) ಯನ್ನು ಉದ್ಘಾಟಿಸಿದರು. ತಿಲುಮಲ ಮೋಟಾರ‍್ಸ್‌ನ ಕೃಷ್ಣಕಿಶೋರ್ ಎನ್.ಟಿ ದಂಪತಿ, ಅವರ ಪುತ್ರ ಅಖಿಲೇಶ್ ದಂಪತಿ ಹಿತೈಷಿಗಳು, ಶೆಲ್ ಇಂಡಿಯಾದ ಡೊಚಾನೆಲ್ ನೆಟ್‌ವರ್ಕ್‌ನ ಡೆವಲಪ್‌ಮೆಂಟ್ ಮೆನೇಜರ್ ಮೊಹ್‌ಶಿನ್ ಉಪಸ್ಥಿತರಿದ್ದರು. ಮೋಹಿತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ರಾಜಶೇಖರ್ ಜೈನ್, ನ್ಯಾಯವಾದಿ ಕೃಷ್ಣ ಬೆಟ್ಟ, ನರಸಿಂಹಪ್ರಸಾದ್, ಸ್ನೇಹ ಟೆಕ್ಸ್‌ಟೈಲ್ಸ್‌ನ ಸತೀಶ್, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಸುರೇಶ್ ಕಿಣಿ ಸಹಿತ ಹಲವಾರು ಮಂದಿ ಈ ಸಂದರ್ಭ ಉಪಸ್ಥಿತರಿದ್ದರು.


ಗುಣಮಟ್ಟದ ಇಂಧನ, ಗ್ರಾಹಕರ ಸೇವೆ ವಿಶೇಷತೆ:
ಶೆಲ್ ಇಂಡಿಯಾದ ಡೊಚಾನೆಲ್ ನೆಟ್‌ವರ್ಕ್‌ನ ಡೆವಲಪ್‌ಮೆಂಟ್ ಮೆನೇಜರ್ ಮೊಹ್‌ಶಿನ್ ಅವರು ಮಾತನಾಡಿ ಪುತ್ತೂರಿನಲ್ಲಿ ಶೆಲ್ ಇಂಡಿಯಾ ಸೇವೆಗೆ ಕೃಷ್ಣಕಿಶೋರ್ ಮತ್ತು ಅವರ ಪುತ್ರ ಅಖೀಲೇಶ್ ಕಾರಣಕರ್ತರಾಗಿದ್ದಾರೆ. ಉತ್ತಮ ಗುಣಮಟ್ಟದ ಇಂಧನ ಮತ್ತು ಗ್ರಾಹಕರಿಗೆ ತೃಪ್ತಿದಾಯಕ ಸೇವೆ ಶೆಲ್ ಇಂಡಿಯಾದ ವಿಶೇಷತೆ. ಇಲ್ಲಿ ಗ್ರಾಹಕರು ಸಂತೋಷದಾಯಕವಾಗಿರಬೇಕೆಂದು ಹಲವು ಸೇವೆಗೆ ಆದ್ಯತೆ ನೀಡಲಾಗಿದೆ. ಗ್ರಾಹರಿಗೆ ಕೆಫೆ ಸೌಲಭ್ಯ, ವಾಹನದ ಸುರಕ್ಷತೆ ದೃಷ್ಟಿಯಿಂದ ಆಯಿಲ್ ಚೇಂಜ್ ವ್ಯವಸ್ಥೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲಿದೆ. ಭಾರತದಲ್ಲಿ ಲಭ್ಯವಿರುವ ಸಾಮಾನ್ಯ ಮೇನ್‌ಗ್ರೇಡ್ ಇಂಧನದ ಪೆಟ್ರೋಲ್ ಮತ್ತು ಡೀಸೆಲ್ ಬದಲಾವಣೆಯಾದ ಶೆಲ್ ಸೂಪರ್, ಉತ್ತಮ ಗುಣಮಟ್ಟದ ಮೂಲಕ ಹೆಚ್ಚಿನ ಇಂಧನ ದಕ್ಷತೆಯನ್ನು ಖಚಿತಪಡಿಸುತ್ತದೆ ಎಂದರು.


ಇಂಧನದ ಜೊತೆ ವಾಹನದ ಸುರಕ್ಷತೆ, ಗ್ರಾಹಕರ ದಾಹ ತೀರಿಸುವ ಅವಕಾಶ:
ತಿರುಮಲ ಬ್ರ್ಯಾಂಡ್‌ನಲ್ಲಿರುವ ಶೆಲ್ ಇಂಡಿಯಾ ತಿರುಮಲ ಪ್ಯೂಯಲ್ಸ್ ನಲ್ಲಿ ವಾಹನದಲ್ಲಿ ಬಂದಿರುವ ಗ್ರಾಹಕರನ್ನು ಸ್ವಾಗತಿಸಿ, ಸುರಕ್ಷಿತಾ ಗಾರ್ಡ್ ವಾಹನದ ಮುಂದೆ ಇಡುತ್ತಾರೆ ಬಳಿಕ ಇಂಧನದ ಭರಿಸುತ್ತಾರೆ. ಇದೇ ಸಂದರ್ಭ ಕಾರಿನಲ್ಲಿ ಬಂದವರಿಗೆ ಕಾರ್ ಎಸ್ಸಸರಿಸ್ ಸೌಲಭ್ಯ. ವಾಹನದ ಇಂಜಿನ್ ಆಯಿಲ್ ಬದಲಾಯಿಸಲು ಪ್ರತ್ಯೇಕ ವಿಭಾಗ ಸೌಲಭ್ಯ. ಜೊತೆಗೆ ಗ್ರಾಹಕರ ದಾಹ ತೀರಿಸಲು ಕೆಫೆ ಅವಕಾಶವಿದೆ. ಈ ಸಂಸೆ ಡೀಲರ್ ಮಾಲಕತ್ವದ ಡೀಲರ್ ಚಾಲಿತ ಎಂದು ಕಾರ್ಯಕ್ರಮ ನಿರೂಪಕ ಮೋಹಿತ್ ಕುಮಾರ್ ತಿಳಿಸಿದರು.

LEAVE A REPLY

Please enter your comment!
Please enter your name here