ಬಡಗನ್ನೂರು ಗ್ರಾ.ಪಂ: ಗೃಹಲಕ್ಷ್ಮಿ ಯೋಜನೆಯ ತಾಂತ್ರಿಕ ಸಮಸ್ಯೆ ಸರಿಪಡಿಸುವ ಅಧಿಕಾರಿ ಗೈರು

0

ಬಡಗನ್ನೂರು: ಗೃಹಲಕ್ಷ್ಮಿ ಯೋಜನೆ  ಸಮರ್ಪಕವಾಗಿ ಅನುಷ್ಠಾನ ಬಗ್ಗೆ  ತಾಂತ್ರಿಕ ಸಮಸ್ಯೆ ಸರಿಪಡಿಸುವ ಬಗ್ಗೆ ಡಿ.27 ರಿಂದ 29 ರ ತನಕ ಶಿಬಿರ ಆಯೋಜನೆ ‌ ಮಾಡುವ ಬಗ್ಗೆ ಕರ್ನಾಟಕ ಸರ್ಕಾರದ ಸುತೋಲೆ ಹೋರಡಿಸಿದ್ದು   ಇದರ ಸಮಸ್ಯೆ ಸರಿಪಡಿಸಲು ಗ್ರಾ.ಪಂಚಾಯತ್,  ಪೋಸ್ಟ್ ಆಫೀಸ್, ಬ್ಯಾಂಕ್ ಅಧಿಕಾರಿಗಳು ಮತ್ತು ಗ್ರಾಮ ಒನ್ ಸಿಬ್ಬಂದಿಗಳು ಕರ್ತವ್ಯ ಹಂಚಿಕೆ ಮಾಡಲಾಗಿತ್ತು ಆದರೆ ಕಾರ್ಯಾಗಾರದಲ್ಲಿ ಬ್ಯಾಂಕ್ ಅಧಿಕಾರಿಗಳು,  ಪೋಸ್ಟ್ ಆಫೀಸ್ ಅಧಿಕಾರಿಗಳು ಹಾಗೂ ಗ್ರಾಮ ಒನ್ ಸಿಬ್ಬಂದಿಗಳು  ಹಾಜರಾಗದೆ ಇದ್ದ ಕಾರಣ ಗ್ರಾಮಸ್ಥರು ಕೊಂಚ ಹೊತ್ತು ತೊಂದರೆಗೀಡಾದ ಪ್ರಮೇಯ ಕಂಡುಬಂದಿತ್ತು. ತಕ್ಷಣ ಬಡಗನ್ನೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ಬ್ಯಾಂಕ್ ಅಧಿಕಾರಿಗಳಿಗೆ  ವಿಚಾರಿಸಿದಾಗ ಈ ದಿನ ಲಭ್ಯ ಇಲ್ಲ ಎಂದು ತಿಳಿದುಬಂತು. ಈ ಸಂಧರ್ಭದಲ್ಲಿ  ಸ್ಥಳೀಯ  ಗ್ರಾಮ ಒನ್ ಸಿಬ್ಬಂದಿಯನ್ನು ಪಂಚಾಯತಿಗೆ ಕರೆಸಿ ಸಮಸ್ಯೆ ಬಗೆಹರಿಸಲಾಯಿತು.

LEAVE A REPLY

Please enter your comment!
Please enter your name here