ಅಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯಲ್ಲಿ ಕ್ರಿಸ್ಮಸ್, ಹೊಸ ವರ್ಷದ ಪ್ರಯುಕ್ತ ಗ್ರಾಹಕರಿಗೆ ಭರ್ಜರಿ ಆಫರ್

0

ಪುತ್ತೂರು: ಎಪಿಎಂಸಿ ರಸ್ತೆಯ ಜೆಎಂಜೆ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಅಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಠೇವಣಿ ಹೂಡಿಕೆದಾರ ಗ್ರಾಹಕರಿಗೆ ಭರ್ಜರಿ ಆಫರ್ ಅನ್ನು ಪರಿಚಯಿಸುತ್ತಿದೆ.
999 ದಿನಗಳ ಠೇವಣಿ ಹೂಡಿಕೆಗೆ ಶೇ.11 ಬಡ್ಡಿದರವನ್ನು ಸಂಸ್ಥೆಯು ವಿಶೇಷ ಆಫರ್ ಆಗಿ ಗ್ರಾಹಕರಿಗೆ ಠೇವಣಿಗಳಿಗೆ ನೀಡುತ್ತಿದ್ದು ಈ ಆಫರ್ ಜನವರಿ 31ರಂದು ಕೊನೆಗೊಳ್ಳಲಿದೆ. ಜೊತೆಗೆ ಒಂದು ವರ್ಷದ(365 ದಿನ) ಠೇವಣಿಗೆ ಶೇ.10, ಹಿರಿಯ ನಾಗರಿಕರಿಗೆ ಶೇ.10.50, 777 ದಿನಗಳಿಗೆ ಶೇ.10.25, 366 ದಿನಗಳ ಮೇಲ್ಪಟ್ಟು ಶೇ.9 ಬಡ್ಡಿದರವನ್ನು ನೀಡಲು ಸಂಸ್ಥೆಯು ಮುಂದಾಗಿದೆ.
ಇದಲ್ಲದೆ ನಿರಖು ಠೇವಣಿ ಯೋಜನೆಗಳು, ವಿಧವೆಯರಿಗೆ, ಅತೀತಚೇತನರಿಗೆ, ಸೈನಿಕರಿಗೆ, ನಿವೃತ್ತ ಸೈನಿಕರಿಗೆ, ನಿವೃತ್ತ ಪೊಲೀಸರಿಗೆ(ಸೂಕ್ತ ದಾಖಲಾತಿ ಒದಗಿಸುವುದು) ವಿಶೇಷ ಮೀಸಲಾತಿ ಬಡ್ಡಿದರ, ಮಾಸಿಕ ವರಮಾನ ಯೋಜನೆಯಲ್ಲಿ 36 ತಿಂಗಳಿಗೆ ರೂ.1 ಲಕ್ಷಕ್ಕೆ ಪ್ರತೀ ತಿಂಗಳು ರೂ.7೦೦/- ಬಡ್ಡಿ ಪಡೆಯಿರಿ, ಅಭ್ಯುದಯ ಸಮೃದ್ಧಿ ಯೋಜನೆಯಲ್ಲಿ 96 ತಿಂಗಳುಗಳಲ್ಲಿ ನಿಮ್ಮ ಹಣ ದ್ವಿಗುಣ, ಅಲ್ಪಾವಧಿ ಠೇವಣಿ ಯೋಜನೆಗಳು, ನಿತ್ಯನಿಧಿ ಖಾತೆಯೊಂದಿಗೆ ಸೇವಾ ವೈಶಿಷ್ಟ್ಯಗಳಾದ ಆರ್.ಟಿ.ಜಿ.ಎಸ್./ಎನ್.ಇ.ಎಫ್.ಟಿ.(ಬ್ಯಾಂಕ್ ಸಹಯೋಗದೊಂದಿಗೆ), ಪಾನ್ ಕಾರ್ಡ್, ಆರ್.ಟಿ.ಸಿ.(ಪಹಣಿಪತ್ರ), ಸರಳ ಬಡ್ಡಿದರದಲ್ಲಿ ತ್ವರಿತ ಸೇವೆಯೊಂದಿಗೆ ಅಡಮಾನ ಸಾಲ, ವ್ಯಾಪಾರ ಸಾಲ, ಓವರ್ ಡ್ರಾಫ್ಟ್ ಸಾಲ, ವೈಯಕ್ತಿಕ ಸಾಲ, ವಾಹನ ಸಾಲ ಹೊಂದಿದ್ದು ಗ್ರಾಹಕರು ಇದರ ಪ್ರಯೋಜನಪಡೆದುಕೊಳ್ಳುವಂತೆ ಅಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here