ಉಪ್ಪಿನಂಗಡಿಯಲ್ಲಿ ಸುಮಾ ಬೇಕರಿ ಶುಭಾರಂಭ

0

ಉಪ್ಪಿನಂಗಡಿ: ಇಲ್ಲಿನ ಹಳೆಬಸ್ ನಿಲ್ದಾಣ ಬಳಿಯ ಶ್ರೀನಿವಾಸ ಕೃಪಾ ಬಿಲ್ಡಿಂಗ್‌ನಲ್ಲಿ ಸುಮಾ ಬೇಕರಿ ಜ.5ರಂದು ಶುಭಾರಂಭಗೊಂಡಿತು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕರುಣಾಕರ ಸುವರ್ಣ ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿ, ಶುಭ ಹಾರೈಸಿದರು.

ಈ ಸಂದರ್ಭ ಸಚಿನ್ ಜ್ಯೂಸ್ ಸೆಂಟರ್‌ನ ಮಾಲಕ ಸುಂದರ ಗೌಡ, ಉಪ್ಪಿನಂಗಡಿ ಮಾಲೀಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷ ಯೂಸುಫ್ ಹಾಜಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ, ವರದರಾಜ್ ಮೆಟಲ್ ಮಾರ್ಟ್‌ನ ಮಾಲಕ ಎಂ. ವರದರಾಜ್, ನಮಸ್ತೆ ಸ್ಟೋರ್‌ನ ಮಾಲಕ ಕೈಲಾರು ರಾಜಗೋಪಾಲ ಭಟ್, ಹಿರಿಯರಾದ ಎನ್. ಉಮೇಶ್ ಶೆಣೈ, ಉಪ್ಪಿನಂಗಡಿ ಶ್ರೀನಿವಾಸ ಕೃಪಾ ಬಿಲ್ಡಿಂಗ್ ಮಾಲಕ ಶ್ರೀನಿವಾಸ ನಾಯಕ್ ಉಪಸ್ಥಿತರಿದ್ದು, ಶುಭ ಹಾರೈಸಿದರು. ಸಂಸ್ಥೆಯ ಮಾಲಕರಾದ ಸೋಮಸುಂದರ್, ಸುನಿತಾ, ಅತಿಥಿಗಳನ್ನು ಸ್ವಾಗತಿಸಿ ಬರಮಾಡಿಕೊಂಡರು. ಕಾಣಿಯೂರು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಜಗದೀಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here