ಸಾಹಿತಿ ಅಮೃತ ಸೋಮೇಶ್ವರ ನಿಧನಕ್ಕೆ ಶಾಸಕ ಅಶೋಕ್ ರೈ ಸಂತಾಪ

0

ಪುತ್ತೂರು: ಹಿರಿಯ ಸಾಹಿತಿ, ವಿದ್ವಾಂಸರಾದ ಪ್ರೊ. ಅಮೃತ ಸೋಮೇಶ್ವರ ಅವರ ನಿಧನಕ್ಕೆ ಪುತ್ತೂರು ಶಾಸಕ ಅಶೋಕ್ ರೈ ಸಂತಾಪ ಸೂಚಿಸಿದ್ದಾರೆ. ಪುತ್ತೂರಿನಲ್ಲಿ ಅನೇಕ ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅಮೃತ ಸೋಮೇಶ್ವರ ಅವರು ನೂರಾರು ವಿದ್ಯಾರ್ಥಿಗಳನ್ನು ರೂಪಿಸಿದ್ದಾರೆ.

ತುಳು, ಕನ್ನಡ ಸಾಹಿತಿಯಾಗಿ, ತುಳು ಜನಪದ ಸಂಶೋಧಕರಾಗಿ‌, ಯಕ್ಷಗಾನ ಪ್ರಸಂಗಕರ್ತರಾಗಿ‌ ಸಾಹಿತ್ಯ ಲೋಕಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರು ಬರೆದ ಅನೇಕ ಗೀತೆಗಳು, ಭಕ್ತಿಗೀತೆಗಳು ಪ್ರಸಿದ್ಧವಾಗಿದೆ. ಕರಾವಳಿಯ ಆಧುನಿಕ ಸಾಹಿತ್ಯ ಲೋಕದ ಭೀಷ್ಮನಂತೆ ಕಂಗೊಳಿಸುತ್ತಿದ್ದ ಅಮೃತರು ನೂರಾರು ಯುವ ಕವಿ, ಸಾಹಿತಿಗಳಿಗೆ ಮಾರ್ಗದರ್ಶಕರಾಗಿದ್ದರು. ಅಮೃತ ಸೋಮೇಶ್ವರ ತಮ್ಮ ಬರಹಗಳ ಮೂಲಕ ತುಳುನಾಡಿನಲ್ಲಿ ಶಾಶ್ವತವಾಗಿ ಉಳಿಯಲಿದ್ದಾರೆ ಎಂದು ಶಾಸಕರು ತಮ್ಮ ನುಡಿ ನಮನದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here