ನಾಡಾಜೆ ಕೊಂಬಳ್ಳಿ ರಸ್ತೆ ಕಾಂಕ್ರೀಟ್‌ಗೆ ಶಾಸಕರಿಂದ ಗುದ್ದಲಿಪೂಜೆ

0

ಗ್ರಾಮೀಣ ರಸ್ತೆಗಳನ್ನು ಖಂಡಿತವಾಗಿಯೂ ಅಭಿವೃದ್ದಿ ಮಾಡುತ್ತೇನೆ: ಅಶೋಕ್ ರೈ


ಪುತ್ತೂರು: ಅದೆಷ್ಟೋ ವರ್ಷಗಳಿಂದ ಕಾಂಕ್ರೀಟ್ ಕಾಣದೆ ಗ್ರಾಮೀಣ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ, ಕಳೆದ ಚುನಾವಣೆಯ ಸಂದರ್ಭದಲ್ಲಿ ನಾನು ಗ್ರಾಮಗಳಿಗೆ ತೆರಳಿದ್ದಾಗ ಗ್ರಾಮಸ್ಥರಿಗೆ ಕಾಂಕ್ರೀಟ್ ಮಾಡಿಸುವ ಭರವಸೆಯನ್ನು ನೀಡಿದ್ದೆ ಆ ರಸ್ತೆಗಳಿಗೆ ಒಂದೊಂದಾಗಿ ಅನುದಾನವನ್ನು ನೀಡುತ್ತಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು.


ಅವರು ಮುಂಡೂರು ಗ್ರಾಮದ ಕೊಂಬಳ್ಳಿ ನಾಡಾಜೆ ರಸ್ತೆಗೆ ಕಾಂಕ್ರೀಟ್‌ಗೆ ಗುದ್ದಲಿಪೂಜೆ ನೆರವೇರಿಸಿ ಮತನಾಡಿದರು. ಗ್ರಾಮೀಣ ಭಾಗಕ್ಕೆ ತೆರಳುವ ಒಳರಸ್ತೆಗಳು ತೀರಾ ಹದಗೆಟ್ಟಿದೆ, ಮಳೆಗಾಲದಲ್ಲಿ ಈ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಿಲ್ಲದಂತ ಪರಿಸ್ಥಿತಿಯೂ ಇದೆ ಈ ಹಿನ್ನೆಲೆಯಲ್ಲಿ ಹೆಚ್ಚು ಅನುದಾನವನ್ನು ಗ್ರಾಮೀಣ ರಸ್ತೆಗೆ ಮೀಸಲಿಡುವುದಾಗಿ ಶಾಸಕರು ಹೇಳಿದರು. ಈ ಸಂದರ್ಭದಲ್ಲಿ ವಲಯ ಅಧ್ಯಕ್ಷ ಸುಪ್ರಿತ್ ಕಣ್ಣರಾಯ, ಮುಂಡೂರು ವಲಯ ಅಧ್ಯಕ್ಷ ಯಾಕೂಬ್ ಮುಲಾರ್, ಬೂತ್ ಅಧ್ಯಕ್ಷ ಇಬ್ರಾಹಿಂ ಮುಲಾರ್, ಪ್ರವೀಣ್ ಆಚಾರ್ ನರಿಮೊಗರು, ಮಹೇಶ್ಚಂದ್ರ ಸಾಲಿಯಾನ್, ಇಬ್ರಾಹಿಂ ಕೊಂಬಳ್ಳಿ,ಇಸ್ಮಾಯಿಲ್ ಕೊಂಬಳ್ಳಿ, ಬೂತ್ ಅಧ್ಯಕ್ಷರುಗಳಾದ ಗಣೇಶ್‌ಬಂಗೇರ ಕೊರುಂಗು, ಪದ್ಮಯ್ಯ ನಾಯ್ಕ, ಅಬ್ದುಲ್ ರಹಿಮಾನ್ ಹಾಜಿ ಮುಲಾರ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here