ಹಿರೇಬಂಡಾಡಿ: ದ್ವಿಚಕ್ರ ವಾಹನಕ್ಕೆ ಕಿಡಿಗೇಡಿಗಳಿಂದ ಬೆಂಕಿ

0

ಉಪ್ಪಿನಂಗಡಿ: ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದನ್ನು ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿದ ಘಟನೆ ಹಿರೇಬಂಡಾಡಿ ಗ್ರಾಮದ ಅಡೆಕಲ್‌ನ ಮುಳ್ಳುಗುಡ್ಡೆ ಎಂಬಲ್ಲಿ ಜ.6ರಂದು ರಾತ್ರಿ ನಡೆದಿದೆ.


ಬರಿಮಾರು ಗ್ರಾಮದ ಕಡವಿನ ಬಳಿ ಮನೆಯ ಲಿಖಿತ್ ಕುಮಾರ್ ಅವರು ಜ.6ರಂದು ಮುಳ್ಳುಗುಡ್ಡೆಯ ತನ್ನ ಹೆಂಡತಿಯ ಮನೆಗೆ ಬಂದಿದ್ದು, ರಾತ್ರಿ ಊಟ ಮಾಡಿ 10:30ರ ಸುಮಾರಿಗೆ ಮನೆಯವರೆಲ್ಲಾ ಮಲಗಿದ್ದರು. ಇವರ ಭಾವ ಕೀರ್ತನ್ ಎಂಬವರು ಬಹಿರ್ದೆಸೆಗೆಂದು ರಾತ್ರಿ ಎದ್ದು ಹೊರ ಬಂದಾಗ ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿ ರಸ್ತೆಯಲ್ಲಿ ಮೋಟಾರು ಸೈಕಲ್ಲೊಂದು ಬೆಂಕಿಯಿಂದ ಉರಿಯುತ್ತಿರುವುದು ಕಂಡು ಬಂತು. ಇದನ್ನು ನೋಡಿದ ಕೀರ್ತನ್ ಮನೆಯವರನ್ನು ಎಬ್ಬಿಸಿದ್ದು, ಹೊರಗೆ ಬಂದು ನೋಡಿದಾಗ ಅಲ್ಲಿ ಮನೆಯ ವಾಹನ ನಿಲ್ಲಿಸುವ ಶೆಡ್‌ನಲ್ಲಿ ಲಿಖಿತ್ ಅವರು ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಯಾರೋ ಕಿಡಿಗೇಡಿಗಳು ಅಲ್ಲಿಂದ ಕೊಂಡು ಹೋಗಿ ಮನೆಯಿಂದ 100 ಮೀಟರ್ ದೂರದ ರಸ್ತೆಯಲ್ಲಿ ಬೆಂಕಿ ಹಚ್ಚಿ ಸುಟ್ಟು ನಾಶ ಪಡಿಸಿರುವುದು ಗಮನಕ್ಕೆ ಬಂತು. ಈ ವಾಹನದ ಆರ್.ಸಿ., ಇನ್ಸೂರೆನ್ಸ್ ಇದೇ ವಾಹನದಲ್ಲಿದ್ದು, ಅದು ಕೂಡಾ ಸುಟ್ಟು ಹೋಗಿದೆ. ದ್ವಿಚಕ್ರ ವಾಹನದ ಅಂದಾಜು ಮೌಲ್ಯ 85 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಲಖಿತ್ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here