ಪೊಲೀಸ್ ಇಲಾಖೆಯಿಂದ ಮಾದಕ ದ್ರವ್ಯದ ಬಗ್ಗೆ ಅರಿವು, ಜಾಗೃತಿ ಕಾಲ್ನಡಿಗೆ ಜಾಥಾ

0

ಪುತ್ತೂರು: ದ.ಕ.ಜಿಲ್ಲಾ ಪೊಲೀಸ್, ಪುತ್ತೂರು ನಗರ ಪೊಲೀಸ್ ಠಾಣೆ ವತಿಯಂದ ಮಾದಕ ದ್ರವ್ಯದ ಬಗ್ಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಪುತ್ತೂರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಜ.8ರಂದು ನಡೆಯಿತು. ಕಾಲೇಜು ಆವರಣದಿಂದ ದರ್ಬೆ ತನಕ ಕಾಲ್ನಡಿಗೆ ಜಾಥವು ನಡೆಯಿತು.


ಪುತ್ತೂರು ಡಿವೈಎಸ್ಪಿ ಅರುಣ ನಾಗೇಗೌಡ, ಪುತ್ತೂರು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್, ಎಸ್.ಐ ಆಂಜನೇಯ ರೆಡ್ಡಿ, ಎಸ್.ಐ ಸೇಸಮ್ಮ, ಸಂಚಾರ ಪೊಲೀಸ್ ಠಾಣೆಯ ಎಸ್.ಐ ಕುಟ್ಟಿ ಎಂ.ಕೆ, ಗ್ರಾಮಾಂತರ ಪೊಲೀಸ್ ಠಾಣೆ ಎಸ್.ಐ ಜಂಬೂರಾಜ್ ಮಹಾಜನ್, ಮಹಿಳಾ ಪೊಲೀಸ್ ಠಾಣೆ ಎಸ್.ಐ ಭವಾನಿ, ಸಂತಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಸ್ಟ್ಯಾನಿ ಪಿಂಟೋ, ಪ್ರಾಂಶುಪಾಲ ಅಶೋಕ್ ರಾಯನ್‌ಕ್ರಾಸ್ತ ಸಹಿತ ಕಾಲೇಜಿನ ಪನ್ಯಾಸಕರು, ವಿದ್ಯಾರ್ಥಿಗಳು ಕಾಲ್ನಡಿಗೆ ಜಾಥದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here