ಎಸ್‌ಕೆಎಸ್‌ಎಸ್‌ಎಫ್ ಕುಂಡಾಜೆ ಶಾಖೆ

0

ಅಧ್ಯಕ್ಷ: ಶಾಹುಲ್ ಹಮೀದ್, ಪ್ರ.ಕಾರ್ಯದರ್ಶಿ: ಅಬ್ದುರ್ರಹ್ಮಾನ್ ಅರ್ಶದಿ

ರಾಮಕುಂಜ: ಎಸ್‌ಕೆಎಸ್‌ಎಸ್‌ಎಫ್ ಕುಂಡಾಜೆ ಶಾಖೆಯ 2024-25ನೇ ಸಾಲಿನ ಅಧ್ಯಕ್ಷರಾಗಿ ಎಸ್.ಕೆ.ಶಾಹುಲ್ ಹಮೀದ್ ಅವರು 2ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುರ್ರಹ್ಮಾನ್ ಅರ್ಶದಿ ಆಯ್ಕೆಯಾಗಿದ್ದಾರೆ.


ಇತ್ತೀಚೆಗೆ ಕುಂಡಾಜೆ ಮಸ್ಜಿದುರ್ರಹ್ಮಾನ್ ಹಾಲ್‌ನಲ್ಲಿ ಕೆಎಂಎಸ್ ಸಿದ್ದೀಕ್ ಫೈಝಿ ಹಾಗೂ ಮುನೀರ್ ಆತೂರು ಅವರ ನೇತೃತ್ವದಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಕೋಶಾಧಿಕಾರಿಯಾಗಿ ರಹೀಂ ವಿವಾ, ವರ್ಕಿಂಗ್ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಹನಿಫಿ, ಉಪಾಧ್ಯಕ್ಷರಾಗಿ ಮುಹಮ್ಮದ್ ಕೆ.ಎ.ಕುಂಡಾಜೆ, ಯೂಸುಫ್ ಅಮೈ, ಜೊತೆ ಕಾರ್ಯದರ್ಶಿಗಳಾಗಿ ಕೆ.ಮುಹಮ್ಮದ್ ಮಿಸ್ಬಾಹ್, ಕೆ.ಮುಹಮ್ಮದ್ ಜವಾಝ್ ಆಯ್ಕೆಯಾಗಿದ್ದಾರೆ.


ಗೌರವ ಸಲಹೆಗಾರರಾಗಿ ಇಬ್ರಾಹಿಂ ಮುಸ್ಲಿಯಾರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ತಮೀಂ ಅನ್ಸಾರಿ (ಇಬಾದ್), ಅಶ್ರಫ್ ಪೆಲತ್ತಡಿ (ವಿಖಾಯ), ಕಮಲ್ ಕೌಸರಿ(ಸರ್ಗಾಲಯ), ಅನೀಸ್(ತೈಲಬಾ), ಅಬ್ಬಾಸ್(ಟ್ರೆಂಡ್), ಸಾದಿಕ್ ಎಂ., ಅಬ್ದುಲ್ ಹಮೀದ್ ಹಾಜಿ ನಿರ್ಮಾ ಹಾಗೂ ಕ್ಲಸ್ಟರ್ ಸಮಿತಿ ಕೌನ್ಸಿಲರ್‌ಗಳಾಗಿ ಮುಹಮ್ಮದ್ ಉಸ್ಮಾನ್ ಹಾಜಿ, ಸಿದ್ದೀಕ್ ವಿವಾ, ಇಲ್ಯಾಸ್ ಅರ್ಶದಿ ಕುಂಡಾಜೆ, ಇಬ್ರಾಹಿಂ ಕುಂಡಾಜೆ ಆಯ್ಕೆಯಾದರು.


ಜಮಾತ್ ಅಧ್ಯಕ್ಷರಾದ ಎಸ್.ಕೆ.ಶಾಹುಲ್ ಹಮೀದ್, ಖತೀಬರಾದ ಮುನೀರ್ ಅನ್ವರಿ, ಆರಿಫ್ ಫೈಝಿ, ಮುಹಮ್ಮದ್ ಕುಂಡಾಜೆ, ಅಬ್ದುಲ್ ರಹಿಮಾನ್ ಸಂಪ್ಯಾಡಿ, ಅಶ್ರಫ್ ಪೆಲತ್ತಡಿ, ಯೂಸುಫ್ ಅಮೈ ಮತ್ತಿತರರು ಉಪಸ್ಥಿತರಿದ್ದರು. ಶಾಖಾ ಕಾರ್ಯದರ್ಶಿ ಅಬ್ದುಲ್ ಹಮೀದ್ ಹನೀಫಿ ಸ್ವಾಗತಿಸಿ, ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿದರು.

LEAVE A REPLY

Please enter your comment!
Please enter your name here