ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಗೊನೆಮುಹೂರ್ತ – ಜ.14-ಜ.16 ವರ್ಷಾವಧಿ ಜಾತ್ರೋತ್ಸವ

0

ವಿಟ್ಲ: ಇಡ್ಕಿದು ಗ್ರಾಮದ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಜ.14ರಿಂದ ಜ.16ರ ವರೆಗೆ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಗೊನೆಮುಹೂರ್ತ ನಡೆಯಿತು.


ದೇವಾಲಯದ ಪ್ರಧಾನ ಅರ್ಚಕರಾದ ಗೋವಿಂದ ಜೋಯಿಸ ರವರು ವಿಧಿವಿಧಾನ ನೆರವೇರಿಸಿದರು, ಅರ್ಚಕರಾದ ಗೋಪಾಲಕೃಷ್ಣ ಭಟ್ ರವರು ಸಹಕರಿಸಿದರು.
ಕ್ಷೇತ್ರದ ಪದನಿಮಿತ್ತ ಆಡಳಿತಾಧಿಕಾರಿ ಹಾಗೂ ಇಡ್ಕಿದು ಗ್ರಾಮಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಗೋಕುಲದಾಸ್ ಭಕ್ತ, ಪ್ರಮುಖರಾದ ಪಿ.ರಾಜರಾಮ ಶೆಟ್ಟಿ ಕೋಲ್ಪೆಗುತ್ತು, ಕ್ಷೇತ್ರದ ಉತ್ಸವ ಸಮಿತಿ ಪದಾಧಿಕಾರಿಗಳಾಗಿರುವ ಸುರೇಶ್ ಕೆ.ಎಸ್.ಮುಕ್ಕುಡ, ಪ್ರಕಾಶ್ ಕೆ.ಎಸ್.ಉರಿಮಜಲು, ಕೆ.ವೆಂಕಟರಮಣ ಭಟ್ ಸೂರ್ಯ, ವಿಜಯಕುಮಾರ್ ಗೌಡ ಸೂರ್ಯ, ಚಂದ್ರಶೇಖರ ಕಂಬಳಿ ಅರ್ಕೆಚ್ಚಾರು, ದೇಜಪ್ಪ ಕೋಲ್ಪೆ, ಸುರೇಶ್ ಪೂಜಾರಿ ಸೂರ್ಯ, ವಿ.ಕೆ.ಕುಟ್ಟಿ ಉರಿಮಜಲು, ಉಷಾ ಮುಂಡ್ರಬೈಲು, ಶಶಿಪ್ರಭ ಮಿತ್ತೂರು, ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಸುದೀರ್ ಕುಮಾರ್, ಪ್ರಮುಖರಾದ ಪ್ರಪುಲ್ಲ ಚಂದ್ರ ಪಿ.ಜಿ., ರಮೇಶ್ ಭಟ್ ಎಂ.ಹೆಚ್, ಶಶಿಧರ ಭಂಡಾರಿ, ತಿಮ್ಮಪ್ಪ ಸಪಲ್ಯ ದೇವಸ್ಯ, ಶಿವಪ್ರಕಾಶ್ ಕೂವೆತ್ತಿಲ, ಚಂದ್ರಹಾಸ್ ಕೆರ್ದೆಲ್, ಆನಂದ ನೇರ್ಲಾಜೆ, ಉಮೇಶ್ ಮಡಿವಾಳ, ಜಗದೀಶ್ ದೇವಸ್ಯ, ರೋಹಿತ್ ನೇರ್ಲಾಜೆ, ಸುರೇಶ್ ದಾಸ್ ನೆರ್ಲಾಜೆ ಸೇರಿದಂತೆ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here