ಎಸ್ಕೆಎಸ್ಸೆಸ್ಸೆಫ್ ಕುಂಬ್ರ ಶಾಖೆಯ ಅಧ್ಯಕ್ಷರಾಗಿ ಅಬ್ದುಲ್ ಶುಕೂರ್ ದಾರಿಮಿ, ಪ್ರಧಾನ ಕಾರ್ಯದರ್ಶಿಯಾಗಿ ಝಕರಿಯಾ ಡಿ.ಕೆ ಆಯ್ಕೆ

0

ಪುತ್ತೂರು: ಎಸ್‌ಕೆಎಸ್‌ಎಸ್‌ಎಫ್ ಕುಂಬ್ರ ಶಾಖೆ ಇದರ 2023-24ನೇ ಸಾಲಿನ ಮಹಾಸಭೆ ಕುಂಬ್ರ ಕೆಐಸಿಯಲ್ಲಿ ನಡೆಯಿತು. ಅಬ್ದುಲ್ ಕರೀಂ ದಾರಿಮಿ ದುವಾ ಮಾಡಿದರು. ಅಬ್ದುಲ್ ಶುಕೂರ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಸಭೆಯನ್ನು ಜಿಲ್ಲಾಧ್ಯಕ್ಷ ತಾಜುದ್ದೀನ್ ರಹ್ಮಾನಿ ಉದ್ಘಾಟಿಸಿದರು. ಚುನಾವಣಾಧಿಕಾರಿಗಳಾಗಿದ್ದ ಇಬ್ರಾಹಿಂ ಕೌಸರಿ ಹಾಗೂ ಹನೀಫ್‌ರವರು ಸಂಘಟನಾ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು.ನಂತರ 2024-26ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಅಧ್ಯಕ್ಷರಾಗಿ ಅಬ್ದುಲ್ ಶುಕೂರ್ ದಾರಿಮಿ, ಪ್ರಧಾನ ಕಾರ್ಯದರ್ಶಿಯಾಗಿ ಝಕರಿಯಾ ಡಿ.ಕೆ ಹಾಗೂ ಕೋಶಾಧಿಕಾರಿಯಾಗಿ ಶರಫುದ್ದೀನ್ ಎಂ.ಎಂ ಅವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಲತೀಫ್ ಬೊಳ್ಳಾಡಿ ಹಾಗೂ ಬಶೀರ್ ಕೌಡಿಚ್ಚಾರ್, ವರ್ಕಿಂಗ್ ಕಾರ್ಯದರ್ಶಿಯಾಗಿ ಸ್ವಾದಿಕ್ ಹನೀಫಿ, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ರಹ್ಮಾನ್ ಫೈಝಿ ಹಾಗೂ ಅಬ್ದುಲ್ ರಹ್ಮಾನ್ ಝುಹ್ರಿ ಆಯ್ಕೆಯಾದರು.


ಕ್ಲಸ್ಟರ್ ಕೌನ್ಸಿಲರ್‌ಗಳಾಗಿ ತಾಜುದ್ದೀನ್ ರಹ್ಮಾನಿ, ಅಬ್ದುಲ್ ಕರೀಂ ದಾರಿಮಿ, ಸ್ವಾದಿಕ್ ಹನೀಫಿ, ಬಶೀರ್ ಕೌಡಿಚಾರ್, ಅಬ್ದುಲ್ ರಹ್ಮಾನ್ ಫೈಝಿ, ಅಬ್ದುಲ್ ರಹ್ಮಾನ್ ಝುಹ್ರಿ ಆಯ್ಕೆಯಾದರು.
ಇಬಾದ್ ಉಸ್ತುವಾರಿಯಾಗಿ ಮುನೀರ್ ಅಝ್ಹರಿ, ವಿಖಾಯ ಉಸ್ತುವಾರಿಯಾಗಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಎಸ್.ಎಂ, ಸರ್ಗಲಯ ಉಸ್ತುವಾರಿಯಾಗಿ ಅಬ್ದುಲ್ ಲತೀಫ್ ಡಿ.ಕೆ, ಕ್ಯಾಂಪಸ್ ವಿಂಗ್ ಉಸ್ತುವಾರಿಯಾಗಿ ಮಿಸ್ಬಾಹ್, ಟ್ರೆಂಡ್ ಉಸ್ತುವಾರಿಯಾಗಿ ರಮೀಝ್ ಕೊಯಿಲತ್ತಡ್ಕ, ಟ್ರೆಂಡ್ ಎಜುಕೇಟರ್ ಆಗಿ ರಮೀಝ್ ಎಂಪವರ್ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ಜಲೀಲ್ ಮೈದಾನಿಮೂಲೆ, ಯೂಸುಫ್ ಅರ್ಶದಿ ಡಿಂಬ್ರಿರವರನ್ನು ಆಯ್ಕೆ ಮಾಡಲಾಯಿತು. ಸ್ವಾದಿಕ್ ಹನೀಫಿ ಸ್ವಾಗತಿಸಿದರು. ಡಿ.ಕೆ ಝಕರಿಯಾ ಮುಸ್ಲಿಯಾರ್ ವಂದಿಸಿದರು.

LEAVE A REPLY

Please enter your comment!
Please enter your name here