ಜ.13: ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆ-13 ಸ್ಥಾನಗಳಿಗೆ 32 ಅಭ್ಯರ್ಥಿಗಳು ಕಣದಲ್ಲಿ-ಸಹಕಾರ ಭಾರತಿಗೆ ಬೆಂಬಲ ಸೂಚಿಸಿ ತಟಸ್ಥರಾಗುವುದಾಗಿ ಹೇಳಿದ 4 ಪಕ್ಷೇತರ ಅಭ್ಯರ್ಥಿಗಳು

0

ಪುತ್ತೂರು: ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಗಳಿಗೆ ಜ.13ರಂದು ಚುನಾವಣಾ ಘೋಷಣೆಯಾಗಿದ್ದು ಒಟ್ಟು 32 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಎನ್.ಜೆ.ಗೋಪಾಲ್ ತಿಳಿಸಿದ್ದಾರೆ.


ಸಾಮಾನ್ಯ ಮೀಸಲಾತಿಯ 7 ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಆಲ್ಬರ್ಟ್ ಡಿ.ಸೋಜ ಯಂ., ಬಿ.ಕುಂಞಣ್ಣ ರೈ, ಬಾಲಕೃಷ್ಣ ರೈ ಬಿ, ಬಾಲಕೃಷ್ಣ ಶೆಟ್ಟಿ ಬಿ, ಬಾಲಕೃಷ್ಣ ಎಚ್, ರಾಜೇಂದ್ರ ರೈ ಬಿ, ವೆಂಕಪ್ಪ ಗೌಡ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ತಾರಾನಾಥ ಆಳ್ವ, ಬಾಲಚಂದ್ರ ಕೆ, ಜನಾರ್ದನ ಭಟ್, ಪ್ರೀತಂ ಪೂಂಜ, ಪ್ರವೀಣ ಪ್ರಭು ಡಿ, ಜಯರಾಮ ನಾಯ್ಕ ಕೆ, ವಿಘ್ನೇಶ್ವರ ಎನ್, ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಖಲಂದರ್ ಶಾಫಿ ಎಂ, ರೋಶನ್ ಟೆಲ್ಲೀಸ್, ಹರೀಶ್ ಪೂಜಾರಿ ಅಂತಿಮ ಕಣದಲ್ಲಿದ್ದಾರೆ. ಮಹಿಳಾ ಮೀಸಲಾತಿಯ 2 ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಅನಿತಾ ಡಿಸೋಜ, ಪುಷ್ಪ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಶ್ರೀಲತಾ ಬಿ, ಹರಿಣಾಕ್ಷಿ ಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ನಳಿನಿ ಸುವರ್ಣ ಡಿ, ಸರೋಜಿನಿ, ಹಿಂದುಳಿದ ವರ್ಗ ಎ ಮೀಸಲಾತಿಯ 2 ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮಹಮ್ಮದ್ ಸಿರಾಜ್ ಎಂ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ದಯಾನಂದ ಬಿ, ಹಿಂದುಳಿದ ವರ್ಗ ಬಿ ಮೀಸಲಾತಿಯ 2 ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕ್ಸೇವಿಯರ್ ಡಿ.ಸೋಜ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಎಸ್, ಪ.ಜಾತಿ ಮೀಸಲಾತಿಯ 2 ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನಯನ ಎ. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ರಾಧಾಕೃಷ್ಣ, ಪ.ಪಂಗಡ ಮೀಸಲಾತಿಯ 2 ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಗೋವಿಂದ ನಾಯ್ಕ ಅಜೇರು, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚಂದಪ್ಪ ನಾಯ್ಕ ಕೆ.ಪಿ. ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ವೇದಕೃಷ್ಣ ಕೆ. ಅಂತಿಮ ಕಣದಲ್ಲಿದ್ದಾರೆ.

ಪರಿಯಾಲ್ತಡ್ಕದ ಅನುದಾನಿತ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಜ.13ರಂದು ಬೆಳಿಗ್ಗೆ 9ರಿಂದ ಸಂಜೆ4ರವರೆಗೆ ಮತದಾನ ನಡೆಯಲಿದ್ದು, ಸಂಘದ 1791 ಮತದಾರರು ಮತ ಚಲಾಯಿಸಲಿದ್ದಾರೆ. ಈ ನಡುವೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಹರೀಶ್‌ ಪೂಜಾರಿ, ನಳಿನಿ ಸುವರ್ಣ, ಸರೋಜಿನಿ ಕೆ, ವೇದಕೃಷ್ಣ ಕೊಪ್ಪರತೊಟ್ಟು, ಸಹಕಾರ ಭಾರತಿಯ 13 ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿದ್ದು ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here