ನಿಡ್ಪಳ್ಳಿ ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಗಳ ವಾರ್ಷಿಕ ಜಾತ್ರೋತ್ಸವದ ಗೊನೆ ಮುಹೂರ್ತ

0

 ನಿಡ್ಪಳ್ಳಿ;ನಿಡ್ಪಳ್ಳಿ ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಗಳ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವ ಜ.19 ರಿಂದ 24 ರವರೆಗೆ ನಡೆಯಲಿದ್ದು ಇದರ ಮೊದಲ ಅಂಗವಾಗಿ ಗೊನೆ ಮುಹೂರ್ತ ಕಾರ್ಯಕ್ರಮ ಜ.10 ರಂದು ನಡೆಯಿತು.  ಬೆಳಿಗ್ಗೆ ಗುತ್ತು ಚಾವಡಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಶ್ರೀ ಉಳ್ಳಾಕುಲು ಮೂಲಸ್ಥಾನದಲ್ಲಿ ಅಂಗಣಕ್ಕೆ ಹಾರೆ ಹಾಕಿ ನಂತರ ಬುಳೆನಡ್ಕ ವಿಷ್ಣು ಭಟ್ ತೋಟಕ್ಕೆ ತೆರಳಿ ಗೊನೆ ಕಡಿಯಲಾಯಿತು.     

  ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ಪ್ರವೀಣ್ ಎನ್.ಆರಿಗ ನಿಡ್ಪಳ್ಳಿ ಗುತ್ತು, ಮುಂಡೂರು ವಾಸುದೇವ ಭಟ್ ,ರಾಜಾರಾಮ ಭಟ್ ನಾಕುಡೇಲು, ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ರೈ ಕೊಪ್ಪಳ, ಮಾಜಿ ಅಧ್ಯಕ್ಷ ನಾಗೇಶ ಗೌಡ ಪುಳಿತ್ತಡಿ,ಬಾರಿಕೆ ಮನೆಯವರು, ದೈವಗಳ ಪಾತ್ರಿಗಳು, ಊರ ಭಕ್ತಾದಿಗಳು ಉಪಸ್ಥಿತರಿದ್ದರು. 

LEAVE A REPLY

Please enter your comment!
Please enter your name here