ಪುತ್ತಿಗೆ ಶ್ರೀಗಳ ಭೇಟಿ ಮತ್ತು ಕೋಟಿಗೀತಾ ಯಜ್ಞ ದೀಕ್ಷೆ

0

ಮುಳಿಯ ಶಾಮ್ ಭಟ್ ಹಾಗೂ ಕೇಶವಪ್ರಸಾದ್ ಮುಳಿಯ ಮತ್ತು ಕೃಷ್ಣನಾರಾಯಣ ಮುಳಿಯ ಅವರ ಪಾಂಗಳಾಯಿಯಲ್ಲಿರುವ ಶ್ಯಾಮಲೋಚನ ಮನೆಯಲ್ಲಿ ತುಳಸಿಮಾಲೆ ಹಾಕಿ ಸ್ವಾಗತಿಸಿದರು.
ಸ್ವಾಮಿಗಳು ಪಾದಪೂಜೆ ಸ್ವೀಕರಿಸಿ ಕೋಟಿಗೀತಾ ಯಜ್ಞ ದೀಕ್ಷೆ ನೀಡಿ ಆಶೀರ್ವಾದ ಮಾಡಿ ಹರಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಮಾಜಿ ಅಧ್ಯಕ್ಷರಾದ ಕೊಂಕೋಡಿ ಪದ್ಮನಾಭ ಭಟ್ , ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ರವಿ ನಾರಾಯಣ, ಕೋಕೋ ಗುರು ಸಂಸ್ಥೆಯ ಸಂತೋಷ ಬೋನಂತಾಯ, ಶಿವಳ್ಳಿ ಸಂಘದ ಅಧ್ಯಕ್ಷರಾದ ದಿವಾಕರ ನಿಡ್ವಣ್ಣಾಯ , ಕಾರ್ಯದರ್ಶಿಯಾದ ಭಾಸ್ಕರ ಬಾರ್ಯ, ಮುಳಿಯ ಕಾವೇರಮ್ಮ , ಮುಳಿಯ ಶಾಮ್ ಭಟ್, ರೇಡಿಯೋ ಪಾಂಚಜನ್ಯದ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ , ಇನ್ನರ್ ವೀಲ್ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ , ಕೋಟಿಗೀತಾ ಯಜ್ಞದ ಕೆ. ವೆಂಕಟರಮಣ ಆಚಾರ್ಯ ಹಾಗೆಯೇ ಮುಳಿಯ ಕುಟುಂಬಸ್ಥರು ಮತ್ತು ಮುಳಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ದೀಕ್ಷೆ ಪಡೆದರು.

LEAVE A REPLY

Please enter your comment!
Please enter your name here