ಕುಳ್ಳಾಜೆ(ನಟ್ಟಿ) ನಿವಾಸಿ ಪ್ರಗತಿಪರ ಕೃಷಿಕ ಈಶ್ವರ ನಾಯಕ್ ನಿಧನ

0

ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಕುಳ್ಳಾಜೆ(ನಟ್ಟಿ) ನಿವಾಸಿ, ಪ್ರಗತಿಪರ ಕೃಷಿಕ ಈಶ್ವರ ನಾಯಕ್ (90)ಅವರು ಅಲ್ಪಕಾಲದ ಅಸೌಖ್ಯದಿಂದ ಜ.8ರಂದು ಸ್ವಗೃಹದಲ್ಲಿ ನಿಧನರಾದರು.


ನಟ್ಟಿ ದಿ.ಲಿಂಗಪ್ಪ ನಾಯಕ್ ಹಾಗೂ ಹೇಮಾವತಿ ಅವರ ಪುತ್ರರಾದ ಈಶ್ವರ ನಾಯಕ್ ಅವರು ವಿವಿಧ ಶಿಕ್ಷಣ ಸಂಸ್ಥೆಗಳಿಗೆ, ಧಾರ್ಮಿಕ ಕೇಂದ್ರಗಳಿಗೆ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಹಲವು ಕೊಡುಗೆಗಳನ್ನು ನೀಡಿದ್ದರು. ಅಲ್ಲದೇ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವು ಕೃಷಿಕರಿಗೆ ಆರ್ಥಿಕ ಸಹಕಾರ ನೀಡುತ್ತಿದ್ದರು. ಮೃತರು ಪುತ್ರ ವೇಣುಗೋಪಾಲ, ಪುತ್ರಿಯರಾದ ಚಂದ್ರಾವತಿ, ಶೈಲಜ, ಮಾಲತಿ, ಪ್ರೇಮಲತಾ, ಶಶಿಕಲಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here