ಜ.15-16: ಕಣಿಯಾರು ಧರ್ಮದೈವ ಅಣ್ಣಪ್ಪ ಪಂಜುರ್ಲಿ ಹಾಗೂ ಪರಿವಾರ ದೈವಗಳ ಹರಕೆ ನೇಮೋತ್ಸವ

0

ಕೆಯ್ಯೂರು: ಕೆಯ್ಯೂರು ಗ್ರಾಮದ ಕಣಿಯಾರು ತರವಾಡು ಮನೆಯಲ್ಲಿ ಆರಾಧಿಸಿಕೊಂಡು ಬರುವ ಧರ್ಮದೈವ ಅಣ್ಣಪ್ಪ ಪಂಜುರ್ಲಿ ಹಾಗೂ ಪರಿವಾರ ದೈವಗಳ ಭಂಡಾರ ತಂದು ದೈವಗಳಿಗೆ ಹರಕೆ ನೇಮೋತ್ಸವವು ಜ.15,16ರಂದು ಕಣಿಯಾರು ತರವಾಡು ನಮ್ಮ ಮನೆಯಲ್ಲಿ ನಡೆಯಲಿದೆ.

ಜ.15ರಂದು ಬೆಳಿಗ್ಗೆ ಗಣಪತಿಹೋಮ, ಶ್ರೀ ಸತ್ಯನಾರಾಯಣ ಪೂಜೆ,ಪ್ರಸಾದ ವಿತರಣೆ, ಸ್ಥಳ ಗುಳಿಗ ದೈವದ ತಂಬಿಲ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ದೈವಗಳ ಭಂಡಾರ ತೆಗೆಯುವುದು, ಗುರು ಉಳ್ಳಾಲ್ತಿ, ಪರಿವಾರ ದೈವಗಳ ನೇಮೋತ್ಸವ, ಅನ್ನಸಂತರ್ಪಣೆ ನಡೆಯಲಿದೆ. ಜ.16ರಂದು ಬೆಳಿಗ್ಗೆ ದರ್ಮದೈವ ಅಣ್ಣಪ್ಪ ಪಂಜುರ್ಲಿ ನೇಮೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಮತ್ತು ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ. ಭಗವದ್ ಭಕ್ತರು ಶ್ರೀ ಧರ್ಮದೈವದ ಗಂಧಪ್ರಸಾದವನ್ನು ಸ್ವೀಕರಿಸಬೇಕಾಗಿ ಕುಟುಂಬದ ಯಜಮಾನ ಶೀನ ಅಜಿಲಾಯ ಕಣಿಯಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here