ಕುಂಬ್ರ ಪ್ರಾ.ಕೃ.ಪ ಸಹಕಾರಿ ಸಂಘದ ಅಧ್ಯಕ್ಷ ಕೈಕಾರ ಪ್ರಕಾಶ್ಚಂದ್ರ ಪತ್ನಿ ಶುಭಲಕ್ಷ್ಮೀ ನಿಧನ

0

ಪುತ್ತೂರು: ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರೂ ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಪ್ರಕಾಶ್ಚಂದ್ರ ರೈ ಕೈಕಾರರವರ ಪತ್ನಿ ಶುಭಲಕ್ಷ್ಮೀ(47ವ)ಯವರು ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಜ.17 ರಂದು ಕೈಕಾರದಿಂದ ವರದಿಯಾಗಿದೆ. ಕೈಕಾರದಲ್ಲಿರುವ ತಮ್ಮ ಮನೆಯ ಎದುರು ಗುಡ್ಡದಲ್ಲಿ ಟಾರ್ಪಲ್ ಹಾಕಿ ನಿರ್ಮಿಸಿರುವ ನೀರಿನ ತೊಟ್ಟಿಯ ಬಳಿಗೆ ತೆರಳಿದ್ದ ಶುಭಲಕ್ಷ್ಮೀಯವರು ಆಕಸ್ಮಿಕವಾಗಿ ಕಾಲು ಜಾರಿ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ತೊಟ್ಟಿಯ ಬಳಿ ಶುಭಲಕ್ಷ್ಮೀಯವರ ಎರಡೂ ಪಾದರಕ್ಷೆ ಪತ್ತೆಯಾಗಿದ್ದು ಕಾಲು ಜಾರಿದ ಗುರುತು ಕೂಡ ಇದೆ ಎನ್ನಲಾಗಿದೆ. ನೀರಿನ ತೊಟ್ಟಿಯಲ್ಲಿ ಮೀನು ಸಾಕಾಣೆ ಮಾಡುತ್ತಿದ್ದು ಇದನ್ನು ನೋಡಲು ತೆರಳಿದವರು ನೀರಿನ ತೊಟ್ಟಿಗೆ ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶುಭಲಕ್ಷ್ಮೀಯವರ ಪತಿ ಪ್ರಕಾಶ್ಚಂದ್ರ ರೈಯವರು ಪುತ್ತೂರು ಗ್ರಾಮಾಂತರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.


ಮೃತರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಪುತ್ರ ಪ್ರಖ್ಯಾತ್ ಹಾಗೂ ಪುತ್ರಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪ್ರಶಸ್ತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.ಸ್ಥಳಕ್ಕೆ ಸಂಪ್ಯ ಠಾಣಾ ಸಬ್‌ಇನ್ಸ್‌ಪೆಕ್ಟರ್ ಜಂಬೂರಾಜ್ ಮಹಾಜನ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here