ಕಣಿಯಾರು ಧರ್ಮದೈವ ಅಣ್ಣಪ್ಪ ಪಂಜುರ್ಲಿ ಹಾಗೂ ಪರಿವಾರ ದೈವಗಳ ಹರಕೆ ನೇಮೋತ್ಸವ

0

ಕೆಯ್ಯೂರು: ಕೆಯ್ಯೂರು ಗ್ರಾಮದ ಕಣಿಯಾರು ತರವಾಡು ಮನೆಯಲ್ಲಿ ಆರಾಧಿಸಿಕೊಂಡು ಬರುವ ಧರ್ಮದೈವ ಅಣ್ಣಪ್ಪ ಪಂಜುರ್ಲಿ ಹಾಗೂ ಪರಿವಾರ ದೈವಗಳ ಭಂಡಾರ ತಂದು ದೈವಗಳಿಗೆ ಹರಕೆ ನೇಮೋತ್ಸವವು ನಾಟಿ ವೈದ್ಯ ನಾರಾಯಣ ಅಜಿಲಾಯ ಮನೆಯಲ್ಲಿ  ಜ.15,16ರಂದು ಬಹಳ ವಿಜೃಂಭಣೆಯಿಂದ ನಡೆಯಿತು.

ಜ.15ರಂದು ಬೆಳಿಗ್ಗೆ ಗಣಪತಿಹೋಮ, ಶ್ರೀ ಸತ್ಯನಾರಾಯಣ ಪೂಜೆ,ಪ್ರಸಾದ ವಿತರಣೆ, ಸ್ಥಳ ಗುಳಿಗ ದೈವದ ತಂಬಿಲ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಾತ್ರಿ ದೈವಗಳ ಭಂಡಾರ ತೆಗೆದು, ಗುರು ಉಳ್ಳಾಲ್ತಿ, ಪರಿವಾರ ದೈವಗಳ ನೇಮೋತ್ಸವವು ನಡೆದು ಅನ್ನಸಂತರ್ಪಣೆ ನಡೆಯಿತು. ಜ.16ರಂದು ಬೆಳಿಗ್ಗೆ ಧರ್ಮದೈವ ಅಣ್ಣಪ್ಪ ಪಂಜುರ್ಲಿ ನೇಮೋತ್ಸವ ಬಹಳ ವಿಜೃಂಭಣೆಯಿಂದ ನಡೆದು, ಪ್ರಸಾದ ವಿತರಣೆ, ಮದ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಕೊರಗಜ್ಜ ದೈವದ ನೇಮೋತ್ಸವ ನಡೆಯಿತು. ಕುಟುಂಬದ ಯಜಮಾನ ಶೀನ ಅಜಿಲಾಯ, ಹಿರಿಯರಾದ ಪುಟ್ಟು ಹುಕ್ರ ಅಜಿಲಾಯ, ಮತ್ತು ಕುಟುಂಬಸ್ಥರು , ಊರಿನ ಗಣ್ಯರು ಆಗಮಿಸಿ ಗಂಧಪ್ರಸಾದ ಸ್ವೀಕರಿಸಿದರು. 

LEAVE A REPLY

Please enter your comment!
Please enter your name here