ಕರ್ನೂರು ಮೈರೋಳು ನೂತನ ಅಂಗನವಾಡಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ

0

ಪುತ್ತೂರು:ಪುತ್ತೂರು ತಾಲೂಕು ಪಂಚಾಯತ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ,ಶಿಶು ಅಭಿವೃದ್ಧಿ ಯೋಜನೆ ಪುತ್ತೂರು ,ಗ್ರಾಮ ಪಂಚಾಯತ್ ನೆಟ್ಟಣಿಗೆ ಮುಡ್ನೂರು ,ಬಾಲ ವಿಕಾಸ ಸಮಿತಿ ಕೇಂದ್ರ ಮೈರೋಳು ಇವರ ಸಂಯುಕ್ತ ಆಶ್ರಯದಲ್ಲಿ ದಿ| ರಾಮಣ್ಣ ರೈ ಕರ್ನೂರು ಮೈರೋಳು ಇವರ ಮಕ್ಕಳು ರಿನೀತ್ ರೈ ಹಾಗೂ ಚರಣರಾಜ್ ರೈ ಇವರ ಕೊಡುಗೆಯಾಗಿ ನಿರ್ಮಿಸಿದ ಹಸ್ತಾಂತರಿಸುವ ನೂತನ ಅಂಗನವಾಡಿ  ಕಟ್ಟಡದ ಉದ್ಘಾಟನಾ ಸಮಾರಂಭ ಜ.13ರಂದು ನಡೆಯಿತು.

ಶಾಸಕ ಅಶೋಕ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ ನೆಟ್ಟಣಿಗೆ ಮುಡ್ನೂರು  ಗ್ರಾಮ ಪಂಚಾಯತ್ ಅಧ್ಯಕ್ಷೆ ಅತಿಥಿ ಫೌಸಿಯಾ ಇಬ್ರಾಹಿಂ ,ಗ್ರಾ.ಪಂ ಸದಸ್ಯ ಶ್ರೀರಾಮ್ ಪಕ್ಕಳ ,ಗ್ರಾ.ಪಂ ಸದಸ್ಯ ಕುಮಾರ್‌ನಾಥ್ ಪೂಜಾರಿ ,ಪುತ್ತೂರು ಸಿಡಿಪಿಓ ಮಂಗಳ ಕೆ ಪ್ರಭಾರ ,ಪುತ್ತೂರು ಸಿಡಿಪಿಓ ಮೇಲ್ವಿಚಾಲಕರು ಸುಲೋಚನ, ಗ್ರಾ.ಪಂ ನೆಟ್ಟಣಿಗೆ ಮುಡ್ನೂರು  ಅಧ್ಯಕ್ಷ ರಮೇಶ್ ರೈ ಸಾಂತ್ಯ , ಮಾಜಿ ಸದಸ್ಯ ಅಬ್ದುಲ್ ಖಾದರ್ ನರ್ಸಿನಡ್ಕ, ರತನ್ ಕುಮಾರ್ ನಾಕ್ ಕರ್ನೂರು ಗುತ್ತು, ಇಂದಿರಾ ರಾಮಣ್ಣ ರೈ ಮೈರೋಳು,ಕಟ್ಟಡದ ದಾನಿಗಳು,ಮೈರೋಳು ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಪುಷ್ಪಾವತಿ ಡಿ,ಮೈರೋಳು ಅಂಗನವಾಡಿ ಸಹಾಯಕಿ ಶಾಂಭವಿ ಉಪಸ್ಥಿತರಿದ್ದರು.

ಶಾಲಾ ಮುಖ್ಯಗುರು ನರ್ಸಿನಡ್ಕ ಅಬ್ದುಲ್ ಖಾದರ್ ಸ್ವಾಗತಿಸಿ,ರಮೇಶ್ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು, ಪ್ರಜ್ಞಾ ರೈ ವಂದಿಸಿದರು.ಕರ್ನೂರು ಅಂಗನವಾಡಿ ಕಾರ್ಯಕರ್ತೆ ಜುಬೈದ ಮತ್ತು ಸ್ರ್ತೀ ಶಕ್ತಿ ಗುಂಪು ಮೈರೋಳು ಮತ್ತು ಪೋಷಕರು, ನೆ.ಮೂ ಗ್ರಾಮದ ಎಲ್ಲಾ ಅಂಗನವಾಡಿ ಕಾರ್ಯಕತೆಯರು ಪಾಲ್ಗೊಂಡರು.

LEAVE A REPLY

Please enter your comment!
Please enter your name here