ನಿಡ್ಪಳ್ಳಿ; ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಸ್ಥಾನ, ಶ್ರೀ ಕ್ಷೇತ್ರ ನಿಡ್ಪಳ್ಳಿ ಇಲ್ಲಿಯ ದೈವಗಳ ವರ್ಷಾವದಿ ಜಾತ್ರೋತ್ಸವ ಜ.19 ರಿಂದ 24 ರವರೆಗೆ ಅದ್ದೂರಿಯಾಗಿ ನಡೆಯಲಿದೆ.
ಜ.19 ರಂದು ರಾತ್ರಿ ಗಂಟೆ 10 ರ ನಂತರ ಗುತ್ತು ಚಾವಡಿಯಿಂದ ಪಿಲಿಭೂತ ಹಾಗೂ ಮಲರಾಯ ದೈವಗಳ ಭಂಡಾರ ಉಳ್ಳಾಕುಲು ಮಾಡಕ್ಕೆ ತರಲಾಯಿತು. ರಾತ್ರಿ ಗಂಟೆ 8 ರಿಂದ ಅನ್ನಸಂತರ್ಪಣೆ.
ಜ.20 ರಂದು ಪ್ರಾತಃಕಾಲ ಉಳ್ಳಾಕುಲು ಮಾಡದಲ್ಲಿ ಮಕರ ತೋರಣ ಏರಿಸುವುದು ಮತ್ತು ಧ್ವಜಾರೋಹಣ ಆಗಿ ತಂಬಿಲಗಳು. ಸಂಜೆ ಗಂಟೆ 6 ರಿಂದ ತೋರಣ ಒಪ್ಪಿಸುವುದು ನಂತರ ದೈವಗಳಿಗೆ ತಂಬಿಲಗಳು.
ಜ.21 ರಂದು ಬೆಳಿಗ್ಗೆ ಗಂಟೆ 9 ರಿಂದ ಕಿನ್ನಿಮಾಣಿ ದೈವಗಳ ನೇಮೋತ್ಸವ. ಮಧ್ಯಾಹ್ನ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ. ಸಂಜೆ ಗಂಟೆ 6 ರಿಂದ ತೋರಣ ಒಪ್ಪಿಸುವುದು ನಂತರ ದೈವಗಳಿಗೆ ತಂಬಿಲಗಳು.
ಜ.22 ರಂದು ಬೆಳಿಗ್ಗೆ ಗಂಟೆ 9 ರಿಂದ ಪೂಮಾಣಿ ದೈವಗಳ ನೇಮೋತ್ಸವ. ಮಧ್ಯಾಹ್ನ ಪ್ರಸಾದ ವಿತರಣೆ ಅನ್ನಸಂತರ್ಪಣೆ. ರಾತ್ರಿ ಗಂಟೆ 8 ಕ್ಕೆ ದೇರ್ಲ ಮನೆಯಿಂದ ಧೂಮಾವತಿ ದೈವದ ಭಂಡಾರ ಬರುವುದು.ರಾತ್ರಿ ಗಂಟೆ 9 ಕ್ಕೆ ಅನ್ನಸಂತರ್ಪಣೆ ನಂತರ ರಾತ್ರಿ ಗಂಟೆ 10 ರಿಂದ ಪಿಲಿಭೂತ ದೈವದ ನೇಮೋತ್ಸವ. ಪ್ರಸಾದ ವಿತರಣೆ.
ಜ.23 ರಂದು ಪ್ರಾತಃಕಾಲ ಗಂಟೆ 2 ರಿಂದ ಧೂಮಾವತಿ ದೈವದ ನೇಮೋತ್ಸವ ಪ್ರಸಾದ ವಿತರಣೆ ಬೆಳಿಗ್ಗೆ ಗಂಟೆ 9 ರಿಂದ ಮಲರಾಯ ದೈವದ ನೇಮೋತ್ಸವ. ಮಧ್ಯಾಹ್ನ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ. ರಾತ್ರಿ ಆನಾಜೆ ಎಂಬಲ್ಲಿ ದೈವಗಳ ಅವಭೃತ ಸ್ನಾನ ಹಾಗೂ ನಾಗನಕಟ್ಟೆಯಲ್ಲಿ ನಾಗತಂಬಿಲ ಮತ್ತು ದೈವಗಳಿಗೆ ತಂಬಿಲಗಳು. ಬಳಿಕ ಉಪಹಾರ.
ಜ.24 ರಂದು ಪ್ರಾತಃಕಾಲ ಗಂಟೆ 4 ಕ್ಕೆ ಧ್ವಜಾವರೋಹಣ, ಬೆಳಿಗ್ಗೆ ಗಂಟೆ 8 ಕ್ಕೆ ಕಾನ ತರವಾಡು ಮನೆಯಿಂದ ಇಷ್ಟದೇವತೆಯ ಭಂಡಾರ ಮತ್ತು ಪಳಂಬೆ ಮನೆಯಿಂದ ರುದ್ರಾಂಡಿ ದೈವದ ಭಂಡಾರ ಬರುವುದು.ಬೆಳಿಗ್ಗೆ ಗಂಟೆ 10 ರಿಂದ ಇಷ್ಟ ದೇವತೆಯ ನೆಮೋತ್ಸವ ಪ್ರಸಾದ ವಿತರಣೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ಅನುವಂಶಿಕ ಆಡಳಿತ ಮೊಕ್ತೇಸರರಾದ ಪ್ರವೀಣ್ ಎನ್, ಆರಿಗ ನಿಡ್ಪಳ್ಳಿ ಗುತ್ತು ಮತ್ತು ಬಾರಿಕೆ ಮನೆಯವರು ತಿಳಿಸಿದ್ದಾರೆ.