ಬೊಳುವಾರು ಕ್ಷೇತ್ರದಲ್ಲಿ ಜ.21ರಂದು ಶ್ರಮಾದಾನ, ಜ.22ರಂದು ಧಾರ್ಮಿಕ ಕಾರ್ಯಕ್ರಮ

0

ಪುತ್ತೂರು: ಬೊಳುವಾರು ಶ್ರೀ ದುರ್ಗಾಪರಮೇಶ್ವರಿ ಉಳ್ಳಾಳ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಜ.24ರಂದು ನಡೆಯಲಿರುವ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಚಂಡಿಕಾಯಾಗದ ಪ್ರಯುಕ್ತ ಜ.21ರಂದು ಬೆಳಿಗ್ಗೆ 9ರಿಂದ ಭಕ್ತಾದಿಗಳಿಂದ ಶುಚಿತ್ವ ಕಾರ್ಯಕ್ರಮ ಮತ್ತು ಶ್ರಮದಾನ ನಡೆಯಲಿರುವುದು.


ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಕ್ಷೇತ್ರದಲ್ಲಿ ಬೆಳ್ಳಿಗ್ಗೆ 8.30ರಿಂದ ಕ್ಷೇತ್ರದ ಮಹಿಳಾ ಭಜನಾ ಮಂಡಳಿಯವರಿಂದ ರಾಮತಾರಕ ಜಪ ಮಂತ್ರ, ಭಗವಧ್ಭಗೀತ ಮತ್ತು ರಾಮಾಯಣ ಪಾರಾಯಣ, ಭಜನಾ ಸಂಕೀರ್ತನೆ, ಶ್ರೀರಾಮನ ಪ್ರಾಣ ಪ್ರತಿಷ್ಠಾನ ಮುಹೂರ್ತಕ್ಕೆ ಸಮಯದಲ್ಲಿ ಶ್ರೀದೇವರಿಗೆ ಮಹಾಮಂಗಳಾರತಿ ಜರಗಲಿರುವುದು ಎಂದು ಮಂದಿರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here