ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ-ಭಕ್ತರೋರ್ವರಿಂದ ಉಚಿತ ಅಟೋ ಸೇವೆ

0

ಉಪ್ಪಿನಂಗಡಿ: ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಜ.22ರಂದು ಶ್ರೀ ರಾಮ ದೇವರ ಪ್ರಾಣಪ್ರತಿಷ್ಠೆಯ ಪ್ರಯುಕ್ತ ಉಪ್ಪಿನಂಗಡಿ ಗ್ರಾಮದ ರಿಕ್ಷಾ ಚಾಲಕರೋರ್ವರು ಆ ದಿನ 10 ಕಿ.ಮೀ.ನಷ್ಟು ಪ್ರಯಾಣಕ್ಕೆ ಉಚಿತ ಸೇವೆ ನೀಡುವುದಾಗಿ ಘೋಷಿಸಿದ್ದಾರೆ.


ಹಿರೇಬಂಡಾಡಿ ಗ್ರಾಮದ ಪಂಚೇರು ನಿವಾಸಿಯಾಗಿರುವ ರಿಕ್ಷಾ ಚಾಲಕ ಹೊನ್ನಪ್ಪ ಗೌಡ ಅವರು ಈ ಘೋಷಣೆ ಮಾಡಿದ್ದು, ಶ್ರೀ ರಾಮ ಮಂದಿರದ ಹಲವು ವರ್ಷಗಳ ಕನಸು ನನಸಾಗುವ ಈ ಸಮಯದಲ್ಲಿ ಈ ಘೋಷಣೆಯನ್ನು ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here