ರಾಮಕುಂಜ: ಬೈ ಹುಲ್ಲು ಲಾರಿ ತಾಗಿ ವಿದ್ಯುತ್ ಕಂಬ, ತಂತಿಗೆ ಹಾನಿ

0

ರಾಮಕುಂಜ: ಬೈ ಹುಲ್ಲು ಸಾಗಾಟದ ಲಾರಿ ತಾಗಿ ಮೂರು ವಿದ್ಯುತ್ ಕಂಬ ಹಾಗೂ ತಂತಿಗೆ ಹಾನಿಯಾಗಿರುವ ಘಟನೆ ಜ.7ರಂದು ರಾಮಕುಂಜ ಗ್ರಾಮದ ನೀರಾಜೆ ಎಂಬಲ್ಲಿ ನಡೆದಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಕೆಎ06, ಸಿ0135 ಲಾರಿಯಲ್ಲಿ ಹುಲ್ಲು ತುಂಬಿಸಿಕೊಂಡು ಹೋಗುತ್ತಿದ್ದ ಚಾಲಕ ಮಲ್ಲೇಶ್ ಎಂಬವರು ರಾಮಕುಂಜ ಗ್ರಾಮದ ನೀರಾಜೆಯಲ್ಲಿ ಲಾರಿಯನ್ನು ಅಜಾಗರೂಕತೆಯಿಂದ ಚಲಾಯಿಸಿ ವಿದ್ಯುತ್ ತಂತಿಗೆ ಹುಲ್ಲು ತಾಗಿಸಿ ವಿದ್ಯುತ್ ತಂತಿಯನ್ನು ಎಳೆದುಕೊಂಡು ಹೋಗಿ 3 ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದು ವಿದ್ಯುತ್ ಕಂಬಗಳು ಮುರಿದುಹೋಗಿವೆ. ಇದರಿಂದಾಗಿ ಇಲಾಖೆಗೆ ಸುಮಾರು 57,270 ರೂ.ನಷ್ಠವಾಗಿದೆ ಎಂದು ಮೆಸ್ಕಾಂ ಉಪ್ಪಿನಂಗಡಿ ಶಾಖೆ ಸಹಾಯಕ ಇಂಜಿನಿಯರ್ ನಿತಿನ್‌ಕುಮಾರ್ ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನಂತೆ ಕಡಬ ಪೊಲೀಸರು ಅ.ಕ್ರ 11/2024 ಕಲಂ:279.ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here