ಜ.23: ಪಡುಮಲೆ 4 ನೇ ವರ್ಷದ ಶ್ರೀ ಕಟೀಲು ಮೇಳದ ಯಕ್ಷಗಾನ ಬಯಲಾಟ

0

ಬಡಗನ್ನೂರುಃ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಪಡುಮಲೆ ಶ್ರೀ ಕಟೀಲು ಮೇಳದ  ಯಕ್ಷಗಾನ ಬಯಲಾಟ ಸೇವಾ ಸಮಿತಿ ಮತ್ತು ಊರ ಹತ್ತು ಸಮಸ್ತರು, ಪಡುಮಲೆ ಇದರ ವತಿಯಿಂದ ನಡೆಯುವ  4 ನೇ ವರ್ಷದ ಯಕ್ಷಗಾನ ಬಯಲಾಟ”ರಾಮ ರಾಮ ಶ್ರೀ ರಾಮ” ಎಂಬ ಯಕ್ಷಗಾನ ಬಯಲಾಟ ಸೇವೆಯು  ಜ.23 ರಂದು ಸಂಜೆ ಗಂ 6 ರಿಂದ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಲಿರುವುದು.

6.30 ರಿಂದ  ಶ್ರೀ ಕಟೀಲು ಕ್ಷೇತ್ರದ ಪೂಜ್ಯ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರವರಿಂದ ಅರ್ಶೀವಾಚನ ನೀಡಲಿದ್ದಾರೆ. ಕಲಾಭಿಮಾನಿಗಳೂ ಹಾಗೂ ಭಕ್ತಾದಿಗಳೂ ಆದ ತಾವೆಲ್ಲರೂ ಆಗಮಿಸಿ ಪಡುಮಲೆ ಸಮಸ್ತ ದೈವ ದೇವರ ಮತ್ತು ಜಗಜ್ಜನನಿ ಶ್ರೀ ಕಟೀಲು ದೇವಿಯ ಕೃಪೆಗೆ ಪಾತ್ರರಾಗುವಂತೆ  ಸಮಿತಿ ಅಧ್ಯಕ್ಷ ಉದಯ ಕುಮಾರ್ ರತ್ನಮಾನಸ ಪಡುಮಲೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here