ಪಳ್ಳತ್ತಾರು ಮುಹಿಯದ್ದೀನ್ ಜುಮಾ ಮಸೀದಿಯಲ್ಲಿ ಸ್ವಲಾತ್ ವಾರ್ಷಿಕೋತ್ಸವ

0

ಕಾಣಿಯೂರು: ಬೆಳಂದೂರು ಗ್ರಾಮದ ಮುಹಿಯದ್ದೀನ್ ಜುಮಾ ಮಸೀದಿ ಪಳ್ಳತ್ತಾರಿನಲ್ಲಿ ಸ್ವಲಾತು ಶಿಫಾಉ ಸ್ಸಖಾಮ್ ಇದರ 19ನೇ ಸ್ವಲಾತ್ ವಾರ್ಷಿಕೋತ್ಸವ ಕಾರ್ಯಕ್ರಮವು ಜ.20 ಹಾಗೂ 21ರಂದು ನಡೆಯಿತು.


ಜ.20ರಂದು ಪಳ್ಳತ್ತಾರು ಜಮಾಅತಿನ ಅಧ್ಯಕ್ಷ ಉಪ್ಪಂಞಿ ಹಾಜಿ ಅಧ್ಯಕ್ಷತೆ ವಹಿಸಿದರು. ಮಸೀದಿಯ ಖತೀಬರಾದ ಮುಷ್ತಾಕ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೆಕ್ಕಿಲ ಮಸೀದಿಯ ಮುದರ್ರಿಸ್ ಬಹು ಝಿಯಾದ್ ಸಖಾಫಿ ಅವರು ಧಾರ್ಮಿಕ ಪ್ರಭಾಷಣ ನಡೆಸಿದರು.
ಜ.21ರಂದು ಪಳ್ಳತ್ತಾರು ಮಸೀದಿಯ ಗೌರವಾಧ್ಯಕ್ಷ ಅಸ್ಸಯ್ಯದ್ ಮುಹಮ್ಮದ್ ಮದನಿ ತಂಙಳ್ ಅಲ್ ಬುಖಾರಿ ಮೊಗ್ರಾಲ್ ಕೇರಳ ಇವರು ಸ್ವಲಾತ್ ಮಜ್ಲಿಸಿಗೆ ನೇತೃತ್ವ ನೀಡಿ ದುಆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಮಾಅತಿನ ಉಪಾಧ್ಯಕ್ಷ ಯೂಸುಫ್ ಗುಂಡಿನಾರು, ಕಾರ್ಯದರ್ಶಿ ಶಂಸುದ್ದೀನ್ ಬನಾರಿ, ಗುಂಡಿನಾರು ಮದ್ರಸದ ಗೌರವ ಸಲಹೆಗಾರ ಶೇಖ್ ಹಾಜಿ ಬನಾರಿ, ಮುಸ್ಲಿಂ ಜಮಾಅತ್ ಅಧ್ಯಕ್ಷ ಉಮ್ಮರ್ ಕೂಂಕ್ಯ, ಕುತುಬಿಯತ್ ಕಮಿಟಿ ಅಧ್ಯಕ್ಷ ಉಮ್ಮರ್ ಶಾಫಿ, ಎಸ್ ವೈ ಎಸ್ ಅಧ್ಯಕ್ಷ ಅಬೂಬಕರ್ ಫಾಳಿಲಿ, ಎಸ್ ಎಸ್ ಎಫ್ ಅಧ್ಯಕ್ಷ ಸಯ್ಯದ್ ಶಮ್ಮಾಸ್, ಪಳ್ಳತ್ತಾರು ಜಮಾಅತ್ ಗಲ್ಫ್ ಸಮಿತಿಯ ನಾಯಕರು, ಮದ್ರಸ ಅಧ್ಯಾಪಕರಾದ ಹಸನ್ ಝುಹ್ರಿ, ಜಲೀಲ್ ಮುಈನಿ, ಶಿಹಾಬುದ್ದೀನ್ ಫಾಳಿಲಿ ಸೇರಿದಂತೆ ಜಮಾಅತ್ ಕಮಿಟಿಯ ಪದಾಧಿಕಾರಿಗಳು ಹಾಗೂ ಜಮಾಅತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಿಸಲಾಯಿತು.

LEAVE A REPLY

Please enter your comment!
Please enter your name here