ಜ.26:ದೇರ್ಲ ಶ್ರೀ ಲಕ್ಷ್ಮೀ ವೆಂಕಟರಮಣ ಮಠದಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ

0

ಪುತ್ತೂರು:ಕೆಯ್ಯೂರು ಗ್ರಾಮದ ದೇರ್ಲ ಶ್ರೀ ಲಕ್ಷ್ಮೀ ವೆಂಕಟರಮಣ ಮಠದಲ್ಲಿ ವರ್ಷಂಪ್ರತಿ ನಡೆಯುವಂತೆ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮವು ಜ.26ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಬೆಳಿಗ್ಗೆ 07.15ಕ್ಕೆ ಪ್ರಾರ್ಥನೆ, 7.30ಕ್ಕೆ ಗಣಹೋಮ ನಡೆದು 8ಕ್ಕೆ ಕಲಶಾಭಿಷೇಕ ನಡೆಯಲಿದೆ.8.30ಕ್ಕೆ ನಾಗ ತಂಬಿಲ ಸೇವೆ ನಡೆದ ಬಳಿಕ ಸಾಮೂಹಿಕ ಸತ್ಯನಾರಾಯಣ ಪೂಜೆ ಪ್ರಾರಂಭ ವಾಗಿ ಮಧ್ಯಾಹ್ನ 12ಕ್ಕೆ ಮಂಗಳಾರತಿ, ಶ್ರೀ ಲಕ್ಷ್ಮೀವೆಂಕಟರಮಣ ದೇವರಿಗೆ ಪಾನಕ ಪೂಜೆ ಮತ್ತು ಮಹಾಪೂಜೆ ನಡೆದು 12.30ಕ್ಕೆ ಪ್ರಸಾದ ವಿತರಣೆಯಾಗಲಿದೆ.ಅದಾದ ಬಳಿಕ ಮಧ್ಯಾಹ್ನ ಗಂಟೆ 1ಕ್ಕೆ ಅನ್ನ ಪ್ರಸಾದ ವಿತರಣೆಯಾಗಲಿದೆ.ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಲಕ್ಷ್ಮೀವೆಂಕಟ್ರಮಣ ಮಠದ ಸಂಚಾಲಕ ಶಿವಶ್ರೀರಂಜನ್ ರೈ ದೇರ್ಲ ಪ್ರಕಟಣೆಯಲ್ಲಿ ಕೋರಿದ್ದಾರೆ.

LEAVE A REPLY

Please enter your comment!
Please enter your name here