ನಿವೃತ್ತ ಫಾರೆಸ್ಟ್ ಆಫೀಸರ್ ಗೆಣಸಿನ ಕುಮೇರು ಕೇಶವ ಪೂಜಾರಿ ನಿಧನ

0

ಬಡಗನ್ನೂರುಃ ಪುತ್ತೂರು ತಾಲೂಕು ಅರ್ಯಾಪು ಗ್ರಾಮದ ಗೆಣಸಿನ ಕುಮೇರು ನಿವಾಸಿ ಪುತ್ತೂರು ನಿವೃತ್ತ ಫಾರೆಸ್ಟ್ ಆಫೀಸರ್ ಕೇಶವ ಪೂಜಾರಿ ಗೆಣಸಿನ ಕುಮೇರು( 72ವ) ಜ.23 ರಂದು ಮಂಗಳೂರು ಆಸ್ಪತ್ರೆಯೊಂದರಲ್ಲಿ ವಿಧಿವಶರಾದರು.

ಇವರು ಪ್ರಾರಂಭದಲ್ಲಿ ವಿಟ್ಲದಲ್ಲಿ  ಅರಣ್ಯ ಪಾಲಕರಾಗಿ ಕರ್ತವ್ಯ ನಿರ್ವಹಿಸಿದ ಬಳಿಕ ಭಡ್ತಿ ಹೊಂದಿ  ರಕ್ಷಕರಾಗಿ, ಮತ್ತು ಫಾರೆಸ್ಟ್ ಆಫೀಸರ್ ಆಗಿ ಸುಮಾರು 35 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.

ಮೃತರು ಪತ್ನಿ ಲೀಲಾವತಿ,  ಪುತ್ರರಾದ ರವಿರಾಜ್, ಪ್ರಥ್ವಿರಾಜ್, ಚರಣ್ ರಾಜ್, ಅಕ್ಷತ್ ಹಾಗೂ ಸಹೋದರರು ಸಹೋದರಿ, ಸೊಸೆಯಂದಿರು ಅಳಿಯಂದಿರು, ಹಾಗೂ ಕುಟುಂಬಸ್ತರು ಮತ್ತು ಅಪಾರ ಬಂಧು ಮಿತ್ರರನ್ನು  ಅಗಲಿದ್ದಾರೆ. 

LEAVE A REPLY

Please enter your comment!
Please enter your name here