ಸವಣೂರು ಪ್ರಾ.ಕೃ.ಪ.ಸಹಕಾರ ಸಂಘದ ಆಡಳಿತ ಸಮಿತಿ ರಚನೆ

0

ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಅವಿರೋಧ ಆಯ್ಕೆ

ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಸಮಿತಿ ರಚನೆಯು ಸಂಘದ ಸವಣೂರಿನ ಪ್ರಧಾನ ಕಚೇರಿಯಲ್ಲಿ ಜ.24ರ ಬೆಳಿಗ್ಗೆ ನಡೆಯಿತು. ಅಧ್ಯಕ್ಷರಾಗಿ ತಾರಾನಾಥ ಕಾಯರ್ಗ, ಹಾಗೂ ಉಪಾಧ್ಯಕ್ಷರಾಗಿ ಚೇತನ್ ಕುಮಾರ್ ಕೋಡಿಬೈಲು ಅವರನ್ನು ಆಯ್ಕೆ ಮಾಡಲಾಯಿತು.

ಚುನಾವಣಾಧಿಕಾರಿ ಶೋಭಾ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಸಭೆಯಲ್ಲಿ ನಿರ್ದೇಶಕರಾದ ಉದಯ ರೈ ಮಾದೋಡಿ, ಗಣೇಶ್ ನಿಡ್ವಣ್ಣಾಯ, ಚೆನ್ನಪ್ಪ ಗೌಡ ನೂಜಿ, ಪ್ರಕಾಶ್ ರೈ ಸಾರಕರೆ, ಅಶ್ವಿನ್ ಎಲ್ ಶೆಟ್ಟಿ, ಶಿವಪ್ರಸಾದ್ ಕಳುವಾಜೆ, ಗಂಗಾಧರ ಪೆರಿಯಡ್ಕ, ತಿಮ್ಮಪ್ಪ, ಜ್ಣಾನೇಶ್ವರಿ ಕುದ್ಮಾರು, ಸೀತಾಲಕ್ಷ್ಮಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here