ವಾಮದಪದವು ಜೂನಿಯರ್ ಕಾಲೇಜ್‌ನ ನಿವೃತ್ತ ಪ್ರಾಂಶುಪಾಲ ವಿಶ್ವನಾಥ ಶೆಟ್ಟಿ ಕಲ್ಲಾರೆ ನಿಧನ

0

ಪುತ್ತೂರು: ಕಲ್ಲಾರೆ ಶ್ರೀಗುರು ರಾಘವೇಂದ್ರ ಮಠದ ಬಳಿಯ ಅನುಗ್ರಹ ನಿವಾಸದ ನಿವಾಸಿ ವಿಶ್ವನಾಥ ಶೆಟ್ಟಿ(78ವ)ರವರು ಜ.24ರಂದು ನಿಧನರಾದರು. 1946ರ ನವೆಂಬರ್ 10ರಂದು ಜನಿಸಿದ್ದ ವಿಶ್ವನಾಥ ಶೆಟ್ಟಿಯವರು ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಉಪನ್ಯಾಸಕರಾಗಿ ಬಳಿಕ ಬಂಟ್ವಾಳ ತಾಲೂಕಿನ ವಾಮದಪದವು ಜೂನಿಯರ್ ಕಾಲೇಜ್‌ನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ ಹರಿಣಿ ವಿ. ಶೆಟ್ಟಿ, ಪುತ್ರಿಯರಾದ ಶಿಲ್ಪಾ ಶೆಟ್ಟಿ, ಅಕ್ಷತಾ ಶೆಟ್ಟಿ, ಅಳಿಯ ಗಿರೀಶ್ ಶೆಟ್ಟಿ, ಸೊಸೆ ಅಹಲ್ಯಾ ಶೆಟ್ಟಿ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ವಿಶ್ವನಾಥ ಶೆಟ್ಟಿಯವರ ಪುತ್ರರಾದ ಪುತ್ತೂರು ಪವರ್‌ಪ್ಯಾಕ್‌ನ ಮಾಲಕರಾಗಿದ್ದ ಕಿರಣ್ ಶೆಟ್ಟಿ ಅವರು ಒಂದು ವರ್ಷದ ಹಿಂದೆ ಹೃದಯಾಘಾತಕ್ಕೀಡಾಗಿ ನಿಧನರಾಗಿದ್ದರು.

LEAVE A REPLY

Please enter your comment!
Please enter your name here