ಇಂದು ಕೋಡಿಂಬಾಳ: ಕುಕ್ಕೆರೆಬೆಟ್ಟು ತರವಾಡಿನಲ್ಲಿ ಶ್ರೀ ಕಡಂಬಳಿತ್ತಾಯ ಸ್ವಾಮಿಯ ಪ್ರತಿಷ್ಠೆ-ನೇಮೋತ್ಸವ

0

ಕಡಬ: ಕೋಡಿಂಬಾಳ ಗ್ರಾಮದ ಕುಕ್ಕೆರೆಬೆಟ್ಟು ಕುಟುಂಬಸ್ಥರ ತರವಾಡಿನಲ್ಲಿ ಶ್ರೀ ಕಡಂಬಳಿತ್ತಾಯ ಸ್ವಾಮಿಯ ಪ್ರತಿಷ್ಠೆ ಹಾಗೂ ನೇಮೋತ್ಸವ ಕಾರ್ಯಕ್ರಮವು ಇಂದು ನಡೆಯಲಿದೆ.
ಜ.30ರಂದು ಪೂರ್ವಾಹ್ನ ಸ್ವಸ್ತಿ ಪುಣ್ಯಾಹವಾಚನ, ಸ್ಥಳಶುದ್ಧಿ, ಸಪ್ತಶುದ್ಧಿ, ಅಷ್ಟೋತ್ತರ ಶತನಾರಿಕೇಳ, ಗಣಯಾಗ,ಚಂಡಿಕಾಯಾಗ, ನಾಗತಂಬಿಲ ನಡೆದು ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಅಘೋರ ಹೋಮ, ವಾಸ್ತುಪೂಜೆ, ದುರ್ಗಾ ನಮಸ್ಕಾರ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಇಂದು ಕಡಂಬಳಿತ್ತಾಯ ಸ್ವಾಮಿಯ ಪ್ರತಿಷ್ಠೆ-ನೇಮೋತ್ಸವ

ಜ.31ರಂದು ಪೂರ್ವಾಹ್ನ ಸ್ವಸ್ತಿ ಪುಣ್ಯಾಹವಾಚನ, ಕಲಶಪೂಜೆ, ಗಂಟೆ 9.32ರಿಂದ ಮೀನಾ ಲಗ್ನದ ಮುಹೂರ್ತದಲ್ಲಿ ಕಡಂಬಳಿತ್ತಾಯ ಸ್ವಾಮಿಯ ಪ್ರತಿಷ್ಠೆ, ಕಲಶಾಭಿಷೇಕ ನಡೆಯಿತು. ಈ ಸಂದರ್ಭದಲ್ಲಿ ಕೆ.ತಮ್ಮಯ್ಯ ನಾಯ್ಕ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಪೂರ್ವಾಹ್ನ 11 ಗಂಟೆಯ ಬಳಿಕ ಕಡಂಬಳಿತ್ತಾಯ ಸ್ವಾಮಿಯ ನೇಮೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ರುದ್ರಚಾಮುಂಡಿ, ಪಂಜುರ್ಲಿ, ಕಲ್ಲುರ್ಟಿ ಸತ್ಯದೇವತೆ, ಪಂಜುರ್ಲಿ, ಗುಳಿಗ ದೈವಗಳ ನೇಮೋತ್ಸವ ನಡೆದು ಅನ್ನಸಂತರ್ಪಣೆ ನಡೆಯಲಿದೆ

LEAVE A REPLY

Please enter your comment!
Please enter your name here