ಹೊಸಮಠ ಪ್ರಾ.ಕೃ.ಪ.ಸ.ಸಂ.ಅಧ್ಯಕ್ಷರಾಗಿ ಜಯಚಂದ್ರ ರೈ ಕುಂಟೋಡಿ ಆಯ್ಕೆ

0

ಕಡಬ: ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಜಯಚಂದ್ರ ರೈ ಕುಂಟೋಡಿ
ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಫೆ.1ರಂದು ಚುನಾವಣೆ ನಡೆದಿದ್ದು, ಜಯಚಂದ್ರ ರೈ ಕುಂಟೋಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರೀಯೆಯನ್ನು ಸಹಕಾರ ಸಂಘಗಳ ಪುತ್ತೂರು ಉಪವಿಭಾಗದ ಮಾರಾಟಾಧಿಕಾರಿಯಾಗಿರುವ ಶ್ರೀಮತಿ ಶೋಭಾ ರವರು ನಡೆಸಿಕೊಟ್ಟರು.
ಈ ಸಂಧರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಕೃಷ್ಣಪ್ಪ ದೇವಾಡಿಗ ನಿರ್ದೇಶಕರಾದ ಶಿವಪ್ರಸಾದ್ ಪಿ.ವಿ., ಶಶಾಂಕ ಗೋಖಲೆ,ಪದ್ಮಯ್ಯಪೂಜಾರಿ,ಸೀತಾರಾಮ ಡಿ.ಪಿ.,ಜಗನ್ನಾಥ ಜಿ,ಕುಶ ಕುಮಾರ್, ಕುಕ್ಕ ಎನ್, ನೀಲಯ್ಯ ಬಿ,ಸೀತಮ್ಮ,ಸವಿತಾ ಸಿ.ಜಿ. ಹಾಗೂ ಕಾರ್ಯನಿರ್ವಾಹಕರಾದ ಸೋಮಸುಂದರ ಶೆಟ್ಟಿ ಎಂ.ಕೆ,ವಲಯ ಮೇಲ್ವಿಚಾರಾಕರಾದ ಶ್ರೀ ಪ್ರದೀಪ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here