ನೆಹರುನಗರ ರಕ್ತೇಶ್ವರಿ ವಠಾರದಲ್ಲಿ ಮಹಿಳೆ ಆತ್ಮಹತ್ಯೆ

0

ಪುತ್ತೂರು:ಕಬಕ ಗ್ರಾಮದ ನೆಹರುನಗರ ರಕ್ತೇಶ್ವರಿ ವಠಾರದ ಶಿವನಗರ ನಿವಾಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.5ರಂದು ನಡೆದಿದೆ.
ಶಿವಮೊಗ್ಗ ಮೂಲದವರಾಗಿದ್ದು ರಕ್ತೇಶ್ವರಿ ವಠಾರ ಶಿವನಗರ ನಿವಾಸಿ ಮಂಗಳೂರು ಮೋರ್ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿರುವ ಶ್ರೀಧರ್ ಸಿಂಗ್ ಎಂಬವರ ಪತ್ನಿ ಅಶ್ವಿನಿ ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವರು.ಅವರು ಫೆ.5ರಂದು ಬೆಳಿಗ್ಗೆ ಮನೆಯಲ್ಲಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದರು.ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ಅಲ್ಲಿಂದ ಅವರನ್ನು ಮಂಗಳೂರು ಶ್ರೀನಿವಾಸ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ತಡ ರಾತ್ರಿ ಮೃತಪಟ್ಟಿದ್ದಾರೆ.ಫೆ.6ರಂದು ಬೆಳಿಗ್ಗೆ ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ತಂದು ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.ಘಟನೆ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತರು ಗಂಡ ಶ್ರೀಧರ್ ಸಿಂಗ್, ಪುತ್ರ, ಪುತ್ರಿಯನ್ನು ಹಾಗು ಅತ್ತೆ, ಮಾವ, ತಾಯಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here