ಪುತ್ತೂರು: ಸೌದಿ ಅರೇಬಿಯಾದ ದಮಾಮ್ ನಲ್ಲಿ ಇಂದು (ಫೆ.8) ನಡೆಯಲಿರುವ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಭಾಗವಹಿಸಲು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸೌದಿ ಅರೇಬಿಯಾಗೆ ತೆರಳಿದ್ದಾರೆ.
![](https://puttur.suddinews.com/wp-content/uploads/2024/02/3427be3f-7ddc-4106-8b03-090b22792972.jpg)
ದಮಾಮ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಶಾಸಕರನ್ನು ಅನಿವಾಸಿ ಸಂಘಟಕ ಫಾರೂಕ್ ಪೋರ್ಟ್’ವೇ ಸಹಿತ ಹಲವರು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಅನಿವಾಸಿ ಉದ್ಯಮಿಗಳಾದ ಲತೀಫ್ ಮರಕ್ಕಿಣಿ, ನೌಶಾದ್ ಪೋಲ್ಯ, ತಾಹಿರ್ ಸಾಲ್ಮರ, ಬಿ.ಕೆ. ಶಂಸುದ್ದೀನ್ ಬೈರಿಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.