ಫೆ.14 ರಿಂದ ಫೆ.16 ಕೋಡಿಂಬಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ- ಮಜ್ಜಾರು ನೇಮೋತ್ಸವ, ಗೊನೆ ಮುಹೂರ್ತ

0

ಕಡಬ: ಕೋಡಿಂಬಾಳ ಶ್ರೀ ಮಹಾವಿಷ್ಣು ದೇವಸ್ಥಾನದ 11ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಮಜ್ಜಾರು ಶ್ರೀ ಉಳ್ಳಾಕ್ಲು ಶ್ರೀ ರಾಜನ್ ಹಾಗೂ ಸಪರಿವಾರ ದೈವಗಳ ನೇಮೋತ್ಸವ ಕಾರ್ಯಕ್ರಮಗಳು ಫೆ.14‌ ರಿಂದ ಫೆ.16ರವರೆಗೆ ನಡೆಯಲಿದ್ದು, ಫೆ.9ರಂದು ದೇವಸ್ಥಾನದಲ್ಲಿ ಗೊನೆ ಮುಹೂರ್ತ ನಡೆಯಿತು.

ಮುಂಜಾನೆ ದೇವಸ್ಥಾನದ ಆಡಳಿತ ಮೊಕ್ತೆಸರ ಕೃಷ್ಣಪ್ರಸಾದ್ ಎಡಪತ್ಯ, ಆಡಳಿತ ಸಮಿತಿಯ ಅಧ್ಯಕ್ಷ ಚಿದಾನಂದ ಗೌಡ ಪಡೆಜ್ಜಾರು ಹಾಗೂ ಸಮಿತಿಯ ಪದಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ಊರಿನ ಭಕ್ತ ವೃಂದದ ಸಮ್ಮುಖದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಎಂ. ವಿಕ್ರಾಂತ್ ರಾಜ್ ಅವರು ಗೊನೆ ಮುಹೂರ್ತ ನಡೆಸಿದರು. ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಕಾರ್ಯದರ್ಶಿ ಕೇಶವ ಬೇರಿಕೆ, ಉಪಾಧ್ಯಕ್ಷ ಗಿರಿಯಪ್ಪ ಗೌಡ, ಕಾರ್ಯದರ್ಶಿ ನಾಗೇಶ್, ಕೋಶಾಧಿಕಾರಿ ಮಾಧವ ಕೋಲ್ಪೆ, ಅಜಿತ್ ಪಡೆಜ್ಜಾರು, ಪ್ರಮುಖರಾದ ಗಣೇಶ್ ಕೋಲ್ಪೆ, ಸುರೇಶ್ ಕೋಡಿಂಬಾಳ, ಬಾಬು ಪೂಜಾರಿ ಉಂಡಿಲ, ಗಿರೀಶ್ ದೆಂತಾರು, ರಾಜೇಶ್ ಗುಂಡಿಮಜಲು, ಜಯರಾಮ ಗಟ್ಟಿಗಾರು, ವೆಂಕಟ್ರಮಣ ದೇಂತಾರು, ಕರುಣಾಕರ ಪಲ್ಲತ್ತಡ್ಕ, ಸುರೇಶ್ ಕೋಡಿಂಬಾಳ, ಅಣ್ಣು ಅಜಿಲ, ದಯಾನಂದ ದೆಂತಾರು, ಜತ್ತಪ್ಪ ಗೌಡ ಮಜ್ಜಾರು, ಮೇದಪ್ಪ ಪೂಜಾರಿ, ಸುರೇಶ್ ಪಾಲಪ್ಪೆ, ತಿರುಮಲ ಕೋಲ್ಪೆ, ಪ್ರಶಾಂತ್ ರೈ ಗುಂಡಿಮಜಲು ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here