ಐಶ್ವರ್ಯರವರಿಗೆ ಶ್ರದ್ಧಾಂಜಲಿ, ನುಡಿನಮನ

0

ಪುತ್ತೂರು: ನೆಹರೂ ನಗರದ ದಿ.ಆನಂದ ನಾಯ್ಕರವರ ಪುತ್ರಿ ಐಶ್ವರ್ಯರವರು ಜ.21 ರಂದು ಅಕಾಲಿಕವಾಗಿ ನಿಧನರಾಗಿದ್ದು, ಇವರ ಉತ್ತರಕ್ರಿಯೆಯು ಫೆ.3 ರಂದು ಜರಗಿತು.
ಕರ್ನಾಟಕ ಮರಾಟಿ ಫೆಡೆರೇಶನ್ ಮಂಗಳೂರು ಸಮಿತಿಯ ಕಾರ‍್ಯದರ್ಶಿ ವಾಸು ನಾಯ್ಕ್, ಪುತ್ತೂರು ಮಹಮ್ಮಾಯಿ ಸೌಹಾರ್ದ ಸಹಕಾರಿ ಸೊಸೈಟಿ ಅಧ್ಯಕ್ಷ ಶೀನ ನಾಯ್ಕ್ ಹಾಗೂ ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಸಂಚಾಲಕ ಶ್ರೀಧರ್ ನಾಯ್ಕ್ ಮುಂಡೋವುಮೂಲೆ ರವರು ಸಂದಭೋರ್ಚಿತಾಗಿ ಮಾತನಾಡಿ ಐಶ್ವರ್ಯರ ಬಾಲ್ಯ, ವಿದ್ಯಾಭ್ಯಾಸ, ಉದ್ಯೋಗದ ಕನಸು ಬಳಿಕ, ಅನಾರೋಗ್ಯಕ್ಕೆ ತುತ್ತಾದ ವಿಚಾರ ಬೆಂಗಳೂರಿನಲ್ಲಿ ನಡೆದ ವೈದ್ಯಕೀಯ ಚಿಕಿತ್ಸೆ ಬಗ್ಗೆ ಅದಕ್ಕೆ ಸಹಕಾರ ನೀಡಿದ ಸಹೃದಯರ ಬಗ್ಗೆ ವಿಚಾರಗಳನ್ನು ಪ್ರಸ್ತಾಪ ಮಾಡಿದರು.

ಸಹೋದರಿ ಅನುಷಾರವರು ಐಶ್ವರ್ಯರಿಗೆ ಲೀವರ್ ದಾನ ಮಾಡಿದ ತ್ಯಾಗವನ್ನು ಸ್ಮರಿಸಿ, ನುಡಿನಮನ ಸಲ್ಲಿಸಿದರು. ದ.ಕ.ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ ಮಂಗಳೂರಿನ ಸಂಘಟನಾ ಕಾರ‍್ಯದರ್ಶಿ ಚಂದ್ರಶೇಖರ್, ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಇಲ್ಲಿನ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಚೇತನಾ ಪಾವಲು ಮೂಲೆ, ಮುಂಡೋವುಮೂಲೆ ತರವಾಡು ಮನೆ ದೇವತಾ ಸಮಿತಿಯ ಅಧ್ಯಕ್ಷ ಮೋಹನ್ ನಾಯ್ಕ ಸಹಿತ ನೂರಾರು ಮಂದಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here