ಪಾಣಾಜೆ: ದೇವತಲಡ್ಕ ವರ್ಷಾವಧಿ ತಂಬಿಲ, ದುರ್ಗಾಪೂಜೆ ಆಮಂತ್ರಣ ಪತ್ರ ಬಿಡುಗಡೆ

0

ಪಾಣಾಜೆ: ಇಲ್ಲಿನ ದೇವತಲಡ್ಕ ಶ್ರೀ ರಕ್ತಶ್ವರಿ ಭೈರವ ಗುಳಿಗ ಹಾಗೂ ಪರಿವಾರ ದೈವಸ್ಥಾನದಲ್ಲಿ ವಾರ್ಷಿಕ ತಂಬಿಲ ಹಾಗೂ ಸಾರ್ವಜನಿಕ ಶ್ರೀ ದುರ್ಗಾಪೂಜೆಯು ಮಾರ್ಚ್ 19 ರಂದು ನಡೆಯಲಿದ್ದು,‌ ಕಾರ್ಯಕ್ರಮದ‌ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.


ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಕಡಮಾಜೆ ರವರ ಗೌರವ ಉಪಸ್ಥಿತಿಯಲ್ಲಿ ಊರಿನ ಗುರಿಕ್ಕಾರ ಜಗನ್ಮೋಹನ್ ರೈ ಸೂರಂಬೈಲು ಬಿಡುಗಡೆ ಮಾಡಿದರು.ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here