ನಾಳೆ(ಫೆ.19)ಬನ್ನೂರು ಶ್ರೀ ದೆಯ್ಯೆರೆ ಮಾಡ ಕ್ಷೇತ್ರ ಬ್ರಹ್ಮಕಲಶೋತ್ಸವದ ಆಮಂತ್ರಣ ವಿತರಣೆ

0

ಬೊಳುವಾರಿನಿಂದ ದರ್ಬೆ ವರೆಗೆ ಆಮಂತ್ರಣ ವಿತರಣೆ – ವಿಶ್ವನಾಥ ಗೌಡ

ಪುತ್ತೂರು: ಫೆ21 ಮತ್ತು 22 ರಂದು ನಡೆಯುವ ಬನ್ನೂರು ಶ್ರೀ ದೆಯ್ಯೆರೆ ಮಾಡ ಇಷ್ಟ ದೇವತೆ, ರಕ್ತೇಶ್ವರಿ, ಅಣ್ಣಪ್ಪ ಪಂಜುರ್ಲಿ, ಸಾನಿಧ್ಯಗಳ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ ಫೆ.19 ರಂದು ಪುತ್ತೂರು ಪೇಟೆಯಲ್ಲಿ ವಿತರಣೆ ಮಾಡಲಾಗುವುದು ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ ಅವರು ತಿಳಿಸಿದ್ದಾರೆ.


ಕ್ಷೇತ್ರದ ಗೌರವಾದ್ಯಕ್ಷ ಸುದೇಶ್ ಪೂಂಜಾ ಮಾರ್ಗದರ್ಶನದಂತೆ ಜೀರ್ಣೋದ್ದಾರಗೊಂಡ ಕ್ಷೇತ್ರದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಕೊನೆಯ ಸಿದ್ದತಾ ಸಭೆಯಲ್ಲಿ ಅವರು ಮಾತನಾಡಿದರು.

ಪೇಟೆಯಲ್ಲಿ ಆಮಂತ್ರಣ ವಿತರಣೆ ಮಾಡಲು ಸಂಜೆ ಗಂಟೆ 3 ರಿಂದ ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಬಳಿಯಿಂದ ಆಮಂತ್ರಣ ಪತ್ರ ವಿತರಣೆ ಮೆರವಣಿಗೆ ಆರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ಆಮಂತ್ರಣ ವಿತರಣೆಯಲ್ಲಿ ಭಾಗವಹಿಸುವವರು ಬೊಳುವಾರು ಸುಬ್ರಹ್ಮಣ್ಯ ನಗರದಲ್ಲಿ ಸೇರಬೇಕೆಂದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎ ವಿ ನಾರಾಯಣ ಕಾರ್ಯದರ್ಶಿ ಮೌನೀಶ್, ಬ್ರಹ್ಮ ಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ ರೈ ಕೆಳಗಿನಮನೆ, ಖಜಾಂಜಿ ರಮೇಶ್ ಗೌಡ ನೀರ್ಪಾಜೆ, ಸಲಹಾ ಸಮಿತಿ ಸದಸ್ಯ ಜಯಕುಮಾರ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಉಮೇಶ್ ಶೆಟ್ಟಿ ಆನೆಮಜಲು, ಬನ್ನೂರು ಗ್ರಾ.ಪಂ ಉಪಾಧ್ಯಕ್ಷ ಶೀನಪ್ಪ ಕುಲಾಲ್, ನಗರಸಭೆ ಸದಸ್ಯರಾದ ಗೌರಿ ಬನ್ನೂರು, ಮೋಹಿನಿ ವಿಶ್ವನಾಥ ಗೌಡ, ಸಹಿತ ಸಮಿತಿಯ ವಿವಿಧ ಜವಾಬ್ದಾರಿಯಲ್ಲಿರುವ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here