ಬದಿಯಡ್ಕ ಮುನಿಯೂರು ಬೀಡು ಕುಟುಂಬದ ದೈವಗಳ ನೇಮೋತ್ಸವ-ದೈವ ನರ್ತಕ ಡಾ. ರವೀಶ ಪಡುಮಲೆ ಅವರಿಗೆ ಸನ್ಮಾನ

0

ಪುತ್ತೂರು: ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ ವಿಜೇತ ದೈವ ನರ್ತಕ ಡಾ. ರವೀಶ ಪಡುಮಲೆ ಅವರನ್ನು ಬದಿಯಡ್ಕ ಮುನಿಯೂರು ಬೀಡಿನಲ್ಲಿ ಇಂದು ನಡೆದ ನೇಮೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಬಂಟ ಸಮುದಾಯ ಪುರಾತನ ಬೀಡುಗಳಲ್ಲೊಂದಾದ ಬದಿಯಡ್ಕ ಮುನಿಯೂರು ಬೀಡಿನಲ್ಲಿ ಇಂದು ನಡೆದ ಉಳ್ಳಾಕ್ಲು, ಬೀರ್ನಾಳ್ವ, ಧರ್ಮದೈವ, ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವದಲ್ಲಿ ಡಾ. ರವೀಶ ಪಡುಮಲೆ ಅವರನ್ನು ಕುಟುಂಬದ ಪರವಾಗಿ ಸನ್ಮಾನಿಸಲಾಯಿತು. ದ.ಕ ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ, ಜಾನಪದ ಪರಿಷತ್ತು ಬೆಂಗಳೂರಿನ ಸಾಧಕ ರತ್ನ ಪ್ರಶಸ್ತಿ, ಗಡಿನಾಡ ಕನ್ನಡ ರಾಜ್ಯೊತ್ಸವ ಗೌರವ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ, ತುಳುನಾಡ ಐಸಿರಿ ಪ್ರಶಸ್ತಿ, ಪುತ್ತೂರು ಅಕ್ಷಯ ಗುರು ಪ್ರಶಸ್ತಿಯನ್ನು ಪಡೆದಿರುವ ಡಾ. ರವೀಶ ಪಡುಮಲೆ ಕಳೆದ ಹಲವು ವರ್ಷಗಳಿಂದ ಬದಿಯಡ್ಕ ಮುನಿಯೂರು ಬೀಡು ಕುಟುಂಬದ ದೈವ ನರ್ತಕರಾಗಿದ್ದಾರೆ.

LEAVE A REPLY

Please enter your comment!
Please enter your name here