ಕೊಣಾಲು ದೇವತೆ ಟ್ರಸ್ಟ್‌ನಿಂದ ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೇಣಿಗೆ

0

ನೆಲ್ಯಾಡಿ: ಜೀರ್ಣೋದ್ಧಾರಗೊಳ್ಳುತ್ತಿರುವ ಕೊಣಾಲು ಗ್ರಾಮದ ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಕೊಣಾಲು ಬೊಳ್ಳಿಗುಡ್ಡೆ ಶ್ರೀ ಕೊಣಾಲು ದೇವತೆ ದೈವಸ್ಥಾನದ ಟ್ರಸ್ಟ್ ವತಿಯಿಂದ ರೂ. 55 ಸಾವಿರ ದೇಣಿಗೆ ನೀಡಲಾಯಿತು.


ಕೊಣಾಲುದೇವತೆ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಸತೀಶ್ ರೈ ಕೊಣಾಲುಗುತ್ತು, ಕಾರ್ಯದರ್ಶಿ ನೋಣಯ್ಯ ಶೆಟ್ಟಿ ಮರಂದೆ, ಸದಸ್ಯರಾದ ವಾಮನ ಗೌಡ ಕೊಣಾಲು, ದಿನೇಶ್ ಗೌಡ ಕೋಲ್ಪೆ, ಪ್ರಮುಖರಾದ ಸದಾನಂದ ಗೌಡ ಡೆಬ್ಬೇಲಿ, ನಾಗೇಶ್ ಗೌಡ ಮರಂದೆ, ಲೋಕೇಶ್ ಮಡಿವಾಳ ಪಾತೃಮಾಡಿಯವರು ದೇಣಿಗೆ ಮೊತ್ತವನ್ನು ಹಸ್ತಾಂತರ ಮಾಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಾಧವ ಸರಳಾಯ, ಅರ್ಚಕರಾದ ಅಮೃತ ಸರಳಾಯ ಅವರು ದೇಣಿಗೆ ಸ್ವೀಕರಿಸಿದರು.

LEAVE A REPLY

Please enter your comment!
Please enter your name here