ಫೆ.25 -29 ಶ್ರೀ ಕ್ಷೇತ್ರ ಗೆಜ್ಜೆಗಿರಿ ವಾರ್ಷಿಕ ಜಾತ್ರಾ ಮಹೋತ್ಸವ

0

ಫೆ. 27 ಧೂಮಾವತಿ ನೇಮೋತ್ಸವ,28 ಗರಡಿ ನೇಮೋತ್ಸವ ಮತ್ತು ದೇಯಿ ಬೈದೆತಿ ನೇಮೋತ್ಸವ

ಬಡಗನ್ನೂರು: ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಲ್‌  ಶ್ರೀ ದೇಯಿ ಬೈದ್ಯೆತಿ – ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರ ಗೆಜ್ಜೆಗಿರಿ ಇದರ ವಾರ್ಷಿಕ ಜಾತ್ರಾ ಮಹೋತ್ಸವವು ಫೆ.25. ಭಾನುವಾರದಿಂದ 29 ಗುರುವಾರದ ವರೆಗೆ ಮೂಡಬಿದ್ರೆ ಶ್ರೀ ಶಿವಾನಂದ ತಂತ್ರಿಯವರ ನೇತೃತ್ವದಲ್ಲಿ  ವಿವಿಧ ವೈದಿಕ ವಿಧಿ ವಿಧಾನದೊಂದಿಗೆ ತೌಳವ ಪರಂಪರೆಯ ಅನುಸಾರ ವಿಜೃಂಭಣೆಯಿಂದ ನಡೆಯಲಿರುವುದು ಎಂದು ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ  ಪೀತಾಂಬರ ಹೇರಾಜೆ ಬೆಳ್ತಂಗಡಿ. ಮತ್ತು ಜಾತ್ರಾ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶೈಲೇಂದ್ರ ವೈ ಸುವರ್ಣ ಮಂಗಳೂರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಾರ್ಯಕ್ರಮಗಳು;-
ಫೆ.25 ರಂದು ಸಂಜೆ ಗಂ 5.30 ರಿಂದ ಪುಣ್ಯಾಹ ಸ್ಥಳ ಶುದ್ಧಿ ಸಾಮೂಹಿಕ ಪ್ರಾರ್ಥನೆ, ಹೊರಕಾಣಿಕೆ ಸಮರ್ಪಣೆ, ಉಗ್ರಾಣ ಮುಹೂರ್ತ.
ಫೆ.26 ರಂದು ಗಣಪತಿ ಹೋಮ, ಗುರುಪೂಜೆ, ತೋರಣ ಮುಹೂರ್ತ, ನಾಗದೇವರ ಸಾನಿಧ್ಯದಲ್ಲಿ ಶುದ್ದಿಹೋಮ, ಕಲಶಾಭಿಷೇಕ, ಆಶ್ಲೇಷ ಬಲಿ ಮತ್ತು ಧೂಮಾವತಿ ಸಾನಿಧ್ಯ ಹಾಗೂ ಎಲ್ಲಾ ಪರಿವಾರ ಸಾನಿಧ್ಯದಲ್ಲಿ ಶುದ್ದಿ ನವಕ ಪ್ರಧಾನ ಸೇವೆ ನಡೆಯಲಿರುವುದು.10.30 ರಿಂದ ಭಜನಾ ಸಂಕೀರ್ತನೆ, ಬೆಳಗ್ಗೆ 11.20ಕ್ಕೆ ವೃಷಭ ಲಗ್ನ ಸುಮೂಹೂರ್ತದಲ್ಲಿ ಧ್ವಜಾರೋಹಣ, ಪರ್ವ ಸೇವೆ, ಮೂಲಸ್ಥಾನ ಗರಡಿಯಲ್ಲಿ ಮಹಾಪೂಜೆ.ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ.ಸಂಜೆ 6.30 ರಿಂದ ಧೂಮಾವತಿ ಬಲಿ ಉತ್ಸವ ಧರ್ಮ ಚಾವಡಿಯಲ್ಲಿ ಭಗವತಿ ಸೇವೆ ಮಹಾಪೂಜೆ ಬಳಿಕ  ಅನ್ನಸಂತರ್ಪಣೆ ನಡೆಯಲಿರುವುದು. ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಸಂಜೆ 7 ರಿಂದ  ಗೆಜ್ಜೆಗಿರಿ ಮೇಳದವರಿಂದ”  ಸಮಗ್ರ ಕಾರ್ತೆವೀರ್ಯೆ “ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯುವುದು.

27 ರಂದು ಬೆಳಗ್ಗೆ 5.30 ರಿಂದ  ಗಣಪತಿ ಹೋಮ, ಗುರುಪೂಜೆ, ದೈವ ಸಾನಿಧ್ಯ ಶುದ್ಧಿಕಲಶ. 8.30 ರಿಂದ ಧೂಮಾವತಿ ನೇಮೋತ್ಸವ ಮಧ್ಯಾಹ್ನ 12.30 ರಿಂದ ಮಹಾಪೂಜೆ,ಬಳಿಕ ಅನ್ನಸಂತರ್ಪಣೆ ನಡೆಯಲಿದೆ.ಅಪರಾಹ್ನ ಗಂ. 3.30 ರಿಂದ ಕೊರತಿ ದೈವದ ನರ್ತನ ಸೇವೆ, ಸಂಜೆ ಗಂ 6 ರಿಂದ ಧೂಮಾವತಿ ಬಲಿ ಉತ್ಸವ, 7 ರಿಂದ ಸತ್ಯ ಧರ್ಮ ಚಾವಡಿಯಲ್ಲಿ ಮಹಾಪೂಜೆ, 7.30 ರಿಂದ ಕುಪ್ಪೆ ಪಂಜುರ್ಲಿ ನೇಮೋತ್ಸವ ಬಳಿಕ ಅನ್ನಸಂತರ್ಪಣೆ ರಾತ್ರಿ 10 ರಿಂದ ಕಲ್ಲಾಲ್ದಾಯ ದೈವದ ನೇಮೋತ್ಸವ ನಡೆಯಲಿರುವುದು.

ಫೆ. 28 ರಂದು 5.30 ರಿಂದ  ಗಣಹೋಮ, ಗುರುಪೂಜೆ ಮೂಲಸ್ಥಾನ ಗರಡಿ, ಬೆಮ್ಮೆರೆ ಗುಂಡ, ಸತ್ಯ ಧರ್ಮ ಚಾವಡಿಯಲ್ಲಿ ನವಕ ಕಲಶ ಪ್ರಧಾನಹೋಮ, ಅಲಂಕಾರ ಪೂಜೆ, ಮಹಾಪೂಜೆ,ಮಧ್ಯಾಹ್ನ 12.30  ಸತ್ಯ ಧರ್ಮ ಚಾವಡಿಯಲ್ಲಿ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4.30 ರಿಂದ ಮೂಲಸ್ಥಾನ ಗರಡಿಯಲ್ಲಿ ಶುದ್ದಹೋಮ ಕಲಶ.5.30 ರಿಂದ ಧೂಮಾವತಿ ಬಲಿ ಸೇವೆ, ಮೂಲಸ್ಥಾನ ಗರಡಿಯಲ್ಲಿ ಶುದ್ಧ ಕಲಶ ಕ್ರಿಯೆಗಳು, 6.30 ರಿಂದ  ಸತ್ಯ ಧರ್ಮ ಚಾವಡಿಯಲ್ಲಿ ದೀಪಾರಾಧನೆ ಮಹಾಪೂಜೆ.ರಾತ್ರಿ 7 ಕ್ಕೆ  ಮೂಲಸ್ಥಾನ ಗರಡಿಯಿಂದ ಒಲಿಮದೆಯಿಂದ ಹೊರಡುವುದು ರಾತ್ರಿ, 8.30 ರಿಂದ ದೇಯಿಬೈದೆತಿ ನೇಮೋತ್ಸವ, ಮಾತೆ ಮಕ್ಕಳ ಪುನೀತ ಸಮಾಗಮ, 9 ರಿಂದ  ದೇಯಿಬೈದಿತಿ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಬೈದರ್ಕಳ ನೇಮೋತ್ಸವ, ಸಮಾಧಿಯಲ್ಲಿ ದೀಪಾರಾಧನೆ,ರಾತ್ರಿ 10.30  ಮೂಲಸ್ಥಾನ ಗರಡಿಯಲ್ಲಿ ಬೈದರ್ಕಳ ದರ್ಶನ ಸೇವೆ, ಪ್ರಸಾದ ವಿತರಣೆ ನಡೆಯಲಿರುವುದು.ಫೆ 29 ರಂದು ಬೆಳಗ್ಗೆ 5.30 ರಿಂದ  ಎಲ್ಲಾ ಸಾನಿಧ್ಯದಲ್ಲಿ ಶುದ್ದಿ ಕ್ರಿಯೆಗಳು, ಧ್ವಜಾವರೋಹಣ, ಗುರುಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

LEAVE A REPLY

Please enter your comment!
Please enter your name here