ಸಂಭ್ರಮದ ಅನಂತಾಡಿ ಮೆಚ್ಚಿ ಸಂಪನ್ನ-ಊರ ಪರವೂರ ಸಾವಿರಾರು ಭಕ್ತಾದಿಗಳು ಭಾಗಿ

0

ವಿಟ್ಲ: ಬಂಟ್ವಾಳ ತಾಲೂಕಿನ ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ಮೆಚ್ಚಿ ಜಾತ್ರೆಯು ಫೆ.23ರಂದು ರಾತ್ರಿ ಭಂಡಾರವೇರಿ ಫೆ.24ರಂದು ವಿಜೃಂಭಣೆಯಿಂದ ನಡೆಯಿತು. ಬೆಳಗ್ಗಿನಿಂದಲೇ ಕ್ಷೇತ್ರಕ್ಕೆ ಭಕ್ತರು ಆಗಮಿಸಿ ಹರಕೆ ಸಂದಾಯ ಮಾಡಿ ಪ್ರಸಾದ ಪಡೆಯುತ್ತಿರುವುದು ಕಂಡುಬಂತು. ವಿಟ್ಲ, ಪುತ್ತೂರು, ಉಪ್ಪಿನಂಗಡಿ, ಬಿಸಿರೋಡ್ ಕಡೆಗೆ ತೆರಳುವ ಭಕ್ತಾದಿಗಳಿಗೆ ಹೆಚ್ಚುವರಿ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅನಂತಾಡಿ ದೊಡ್ಡಮನೆ ಎಮ್. ಮೋಹನ್ ಪೈ, ನರೇಂದ್ರ ರೈ ನೇಲ್ತೋಟು ಮನೆ ಸೇರಿದಂತೆ ಊರಪರವೂರ ಸಾವಿರಾರು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here