ಪುತ್ತೂರು: ಮದ್ಯವರ್ಜನ ಶಿಬಿರದ 2 ನೇ ಮಾಸಿಕ ಸಭೆ

0

ಪುತ್ತೂರು:1777 ನೇ ಮದ್ಯವರ್ಜನ ಶಿಬಿರದ 2 ನೇ ಮಾಸಿಕ ಸಭೆಯು ಪುತ್ತೂರು ತಾಲೂಕಿನಲ್ಲಿ ನಡೆಯಿತು.ಉದ್ಘಾಟನೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ನೆರವೇರಿಸಿದರು.

ಸಭೆಯ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷ ಲೋಕೇಶ್ ಹೆಗ್ಡೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮತ್ತು ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಮಾಹಿತಿ ನೀಡಿದರು. ಜನಜಾಗೃತಿ ಪದಾಧಿಕಾರಿಗಳಾದ ಡಾ.ನಾರಾಯಣ ಭಟ್, ಸಂಪತ್ ಕುಮಾರ್, ರವಿ ತಾಲೂಕು ಯೋಜನಾಧಿಕಾರಿಗಳಾದ ಶಶಿಧರ್, ಮೇಲ್ವಿಚಾರಕಿ ಶೃತಿ ಹಾಗೂ 9 ವಲಯಗಳ ನವಜೀವನ ಪೋಷಕರು ಮತ್ತು ನವ ಜೀವನ ಸಮಿತಿಯ ಸದಸ್ಯರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು. ಪಾನಮುಕ್ತ ಸದಸ್ಯರು ಹಾಗೂ ಅವರ ಕುಟುಂಬಸ್ಥರು ತಮ್ಮ ಅನುಭವ ಹಂಚಿಕೊಂಡರು. ಈ ಸಂದರ್ಭ ಪಾನಮುಕ್ತ ಸದಸ್ಯರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here