ಅಧಿವಕ್ತಾ ಪರಿಷತ್ತಿನ‌ ಮಂಗಳೂರು ವಿಭಾಗ ಸಂಚಾಲಕರಾಗಿ ನ್ಯಾಯವಾದಿ ಚೇತನ್ ನಾಯಕ್ ಆಯ್ಕೆ

0

ಪುತ್ತೂರು: ಅಧಿವಕ್ತಾ ಪರಿಷತ್ತಿನ‌ ಮಂಗಳೂರು ವಿಭಾಗ ಸಂಚಾಲಕರಾಗಿ ನ್ಯಾಯವಾದಿ ಚೇತನ್ ನಾಯಕ್ ಎಸ್. ಆಯ್ಕೆಯಾಗಿದ್ದಾರೆ.
ಎಬಿವಿಪಿ ಮತ್ತು ಬಿಜೆಪಿ ಯುವಮೋರ್ಚಾದ ವಿವಿಧ ಜವಾಬ್ದಾರಿ ನಿರ್ವಹಿಸಿದ್ದ ಚೇತನ್ ನಾಯಕ್ ಅವರು 8 ವರ್ಷಗಳಿಂದ ಅಧಿವಕ್ತಾ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಮಾ.3ರಂದು‌‌ ಉಡುಪಿಯಲ್ಲಿ ನಡೆದ ಪ್ರಾಂತ ಬೈಠಕ್ ನಲ್ಲಿ ಮಂಗಳೂರು ವಿಭಾಗ ಸಂಚಾಲಕರಾಗಿ ಇವರನ್ನು ನೇಮಕ‌‌ ಮಾಡಲಾಯಿತು.‌ ಪ್ರಮುಖರಾದ ಪ್ರಶಾಂತ್ ಪವರ್, ರಾಷ್ಟ್ರೀಯ ಉಪಾಧ್ಯಕ್ಷ ರಾಜೇಂದ್ರನ್ ಜಿ, ಮಧ್ಯ ಕ್ಷೇತ್ರೀಯ ಸಂಯೋಜಕ ಲಕ್ಷ್ಮಿ ನಾರಾಯಣ ಹೆಗ್ಡೆ , ರಾಜ್ಯ ಕಾರ್ಯಾಧ್ಯಕ್ಷ ಗುರುಪ್ರಸಾದ್ ಶೆಟ್ಟಿ ಮತ್ತು ಪ್ರಾಂತ ಕಾರ್ಯದರ್ಶಿ ಜಗದೀಶ್ ಕೆ.ಅರ್ .‌ ಉಪಸ್ಥಿತರಿದ್ದರು. ಸಾಮೆತ್ತಡ್ಕ ನಿವಾಸಿಯಾಗಿರುವ ಚೇತನ್ ನಾಯಕ್ ಅವರು ಕಳೆದ 15 ವರ್ಷಗಳಿಂದ ಪುತ್ತೂರಿನಲ್ಲಿ ನ್ಯಾಯವಾದಿಯಾಗಿ‌ ಕಾರ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here