ವಿಟ್ಲ: ಪೆರಾಜೆ ಗ್ರಾಮದ ಮಡಲ ಎಂಬಲ್ಲಿ ಹಿಂದೂ ರುದ್ರ ಭೂಮಿ – ಮೋಕ್ಷಧಾಮ ಲೋಕಾರ್ಪಣೆ ಕಾರ್ಯಕ್ರಮ ಮಾ.4ರಂದು ನಡೆಯಿತು.
![](https://puttur.suddinews.com/wp-content/uploads/2024/03/6e4576bd-9dff-4a88-82e1-571777ccd23c.jpg)
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ದವರು ಲೋಕರ್ಪಣೆಗೈದರು. ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಶಾಲ ಎಂ ಪೆರಾಜೆ, ಹಿಂದೂ ರುದ್ರ ಭೂಮಿ ಸಮಿತಿ ಅಧ್ಯಕ್ಷರಾದ ಮಾಧವ ಕುಲಾಲ್ , ಪೆರಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶಶಿ ಕುಮಾರಿ, ಸದಸ್ಯರಾದ ಸುನಿತಾ , ಹರೀಶ್ಚಂದ್ರ ರೈ , ರೋಹಿಣಿ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಶಾರಾದ, ಗ್ರಾಮದ ಹಿರಿಯರಾದ ಬಿ. ಟಿ. ನಾರಾಯಣ ಭಟ್ , ಜಯರಾಮ ರೈ, ಶ್ರೀ ಕಾಂತ ಆಳ್ವ ಪೆರಾಜೆ ಗುತ್ತು, ಚಂದ್ರಹಾಸ ಶೆಟ್ಟಿ ಬುಡೋಳಿಗುತ್ತು, ಶ್ರೀನಿವಾಸ ಪೂಜಾರಿ ಪೆರಾಜೆ , ರಾಘವ ಗೌಡ ಏನಾಜೆ, ದೇಜಪ್ಪ ಪೂಜಾರಿ ಬಡೆಕೋಡಿ, ನಾರಾಯಣ ನಾಯ್ಕ ಪಾಲ್ಯ , ಪೆರಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಭು ಕುಮಾರ ಶರ್ಮಾ , ಕಾರ್ಯದರ್ಶಿ ನಾರಾಯಣ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.