ಮೊಗೇರ ಸಂಘದ ಚಿಕ್ಕಮುಡ್ನೂರು ಗ್ರಾಮ ಸಮಿತಿ ರಚನೆ

0

ಅಧ್ಯಕ್ಷೆ: ನಳಿನಿ ಕೆ., ಪ್ರ.ಕಾರ್ಯದರ್ಶಿ: ವೇದಾಕ್ಷಿ

ಪುತ್ತೂರು: ಪುತ್ತೂರು ಮೊಗೇರ ಸಂಘದ ಚಿಕ್ಕಮುಡ್ನೂರು ಗ್ರಾಮ ಸಮಿತಿ ರಚನೆ ಸೇಡಿಯಾಪುನಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಡಾ| ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ದೀಪ ಪ್ರಜ್ವಲಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತಾಲೂಕು ಮೊಗೇರ ಸಂಘದ ಪ್ರದಾನ ಕಾರ್ಯದರ್ಶಿ ಮುಖೇಶ್ ಕೇಮ್ಮಿಂಜೆ ಮಾತನಾಡಿ ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳ ಕರ್ತವ್ಯ ಹಾಗೂ ಸಂಘಟನೆಯ ಉದ್ದೇಶದ ಬಗ್ಗೆ ತಿಳಿಸಿ ಗ್ರಾಮ ಸಮಿತಿಯ ಸದಸ್ಯರು ತಮ್ಮ ಗ್ರಾಮದ ಸಮೀಕ್ಷೆ ನಡೆಸಿ ಸಮುದಾಯದ ಸ್ಥಿತಿಗತಿ ಮತ್ತು ಕುಂದುಕೊರತೆ ಬಗ್ಗೆ ವಿವರ ನೀಡುವಂತೆ ತಿಳಿಸಿದರು. ಮೊಗೇರ ತಾಲೂಕು ಸಂಘದ ಖಜಾಂಚಿ ರಾಘವ ಖಂಡಿಗ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಮೊಗೇರ ಸಂಘದ ಸಂಘಟನಾ ಕಾರ್ಯದರ್ಶಿ ಚಂದ್ರ ಬೀರಿಗ ಉಪಸ್ಥಿತರಿದ್ದರು.

ಪದಾಧಿಕಾರಿಗಳು:
ಚಿಕ್ಕಮುಡ್ನೂರು ಗ್ರಾಮ ಸಮಿತಿಯ ಅಧ್ಯಕ್ಷರಾಗಿ ನಳಿನಿ ಕೆ., ಉಪಾಧ್ಯಕ್ಷರಾಗಿ ಶುಭಾಕರ, ಪ್ರಧಾನ ಕಾರ್ಯದರ್ಶಿಯಾಗಿ ವೇದಾಕ್ಷಿ, ಜೊತೆ ಕಾರ್ಯದರ್ಶಿಯಾಗಿ ಪವಿತ್ರ, ಸಂಘಟನಾ ಕಾರ್ಯದರ್ಶಿಯಾಗಿ ದಿವ್ಯ ಕೆ., ಜೊತೆ ಸಂಘಟನಾ ಕಾರ್ಯದರ್ಶಿಯಾಗಿ ಪ್ರಮೀಳಾ, ಖಜಾಂಜಿಯಾಗಿ ಗಾಯತ್ರಿರವರನ್ನು ಆಯ್ಕೆ ಮಾಡಲಾಯಿತು. ಗ್ರಾಮ ಸಮಿತಿಯ ನೂತನ ಅಧ್ಯಕ್ಷೆ ನಳಿನಿ ಕೆ. ಮತ್ತು ಪ್ರಧಾನ ಕಾರ್ಯದರ್ಶಿ ವೇದಾಕ್ಷಿ ಅನಿಸಿಕೆ ತಿಳಿಸಿದರು. ದಿವ್ಯ ಕೆ. ವಂದಿಸಿದರು.

LEAVE A REPLY

Please enter your comment!
Please enter your name here