ಕೌಡಿಚ್ಚಾರು: ಈಶ್ವರಮಂಗಲ ನಿವಾಸಿ ಅಬ್ದುಲ್ ಖಾದರ್ ನಿಧನ

0

ಕೌಡಿಚ್ಚಾರು: ಬದಿಯಡ್ಕ ಕರವುತ್ತಡ್ಕ ದಿ.ಮಹಮ್ಮದ್ ಹಾಜಿಯವರ ಮಗ, ಈಶ್ವರಮಂಗಲ ನಿವಾಸಿ ಅಬ್ದುಲ್ ಖಾದರ್ ಹಾಜಿ (57 ವ.)ರವರು ಅಲ್ಪಕಾಲದ ಅಸೌಖ್ಯದಿಂದ ಮಾ.14ರಂದು ಮಂಗಳೂರು ಅತ್ತಾವರ ಕೆ.ಎಂ.ಸಿ.ಆಸ್ಪತ್ರೆಯಲ್ಲಿ ನಿಧನರಾದರು.
ಸೌದಿ ಅರೇಬಿಯಾ ಹಾಗೂ ದುಬೈಯಲ್ಲಿ ಸುಮಾರು 30 ವರ್ಷ ಕೆಲಸ ನಿರ್ವಹಿಸಿ ಕಳೆದ 5 ವರ್ಷಗಳಿಂದ ಈಶ್ವರಮಂಗಲದಲ್ಲಿಯೇ ವಾಸ್ತವ್ಯವಿದ್ದರು. ಸ್ಥಳೀಯರು ಇವರನ್ನು ಡಿ.ಸಿ.ಎಂದೇ ಕರೆಯುತ್ತಿದ್ದರು. ವಿದೇಶದಲ್ಲಿ ಉದ್ಯೋಗದಲ್ಲಿದ್ದ ವೇಳೆ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಗಲ್ಫ್ ಸಮಿತಿ ಸದಸ್ಯರಾಗಿದ್ದರು. ಮೃತರು ಪತ್ನಿ ಶಬಾನ, ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here