ಬೆಟ್ಟಂಪಾಡಿ ಕಜೆ ಅನವುಗಾರ್ ಕುಟುಂಬದ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಕಜೆ ಅನವುಗಾರ್ ಕುಟುಂಬದ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮೇ.2ರಿಂದ 4ರವರೆಗೆ ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಕಜೆ ತರವಾಡು ಮನೆಯಲ್ಲಿ ನಡೆಯಿತು.

ಊರಿನ ಪ್ರಮುಖರಾದ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ, ಕಾಂಗ್ರೆಸ್ ಮುಖಂಡ ಕೃಷ್ಣಪ್ರಸಾದ ಆಳ್ವ, ಬೆಟ್ಟಂಪಾಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಕೊಮ್ಮಂಡ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ನವೀನ್ ರೈ ಚೆಲ್ಯಡ್ಕ, ಬೆಟ್ಟಂಪಾಡಿ ಶ್ರೀದೇವಿ ಕ್ಲಿನಿಕ್‌ನ ಡಾ.ಸತೀಶ್ ರಾವ್, ಆರ್.ಬಿ.ಸುವರ್ಣ, ಕೃಷ್ಣಪ್ಪ ಗೌಡ ರೆಂಜ, ಅನವುಗಾರ್ ಕುಟುಂಬ ತರವಾಡು ಟ್ರಸ್ಟ್ ಗೌರವಾಧ್ಯಕ್ಷ ನಾರಾಯಣ ನಾಯ್ಕ ಕಜೆ, ಅಧ್ಯಕ್ಷ ಕೆ. ಸೇಸಪ್ಪ ನಾಯ್ಕ ಕಜೆ, ಪ್ರಧಾನ ಕಾರ್ಯದರ್ಶಿ ಜಯಪ್ರಸಾದ ಸಿ. ಚೆಲ್ಯಡ್ಕ ಹಾಗೂ ಪದಾಧಿಕಾರಿಗಳು, ಸದಸ್ಯರು, ಶಾರದಾ ಸಮಾಜ ಸಂಘದ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here