ಮಾ.24: ಮಹಾಬಲ-ಲಲಿತಾ ಕಲಾ ಸಭಾದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ

0

ಪುತ್ತೂರು: ಮಹಾಬಲ-ಲಲಿತ ಕಲಾ ಸಭಾದ ಆಶ್ರಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಮಾ.24 ರಂದು ಸಂಜೆ ಬೊಳ್ವಾರು ಮಹಾವೀರ ವೆಂಚರ್ಸ್ ನ ಎರಡನೇ ಮಹಡಿಯ ಹವಾನಿಯಂತ್ರಿತ ಸಭಾಭವನದಲ್ಲಿ ಜರಗಲಿದೆ.

ಕಾರ್ಯಕ್ರಮದಲ್ಲಿ ಗಾಯನವನ್ನು ಭಾರತರತ್ನ ಎಂ.ಎಸ್ ಸುಬ್ಬುಲಕ್ಷ್ಮೀರವರ ಮರಿಮಕ್ಕಳು, ಸಂಗೀತರತ್ನಾಕರ ಡಾ.ರಾಧಾ ವಿಶ್ವನಾಥನ್ ರವರ ಮೊಮ್ಮಕ್ಕಳು, ಡಿವೈನ್ ಡ್ಯುಯೆಟ್ ಸಹೋದರಿಯರಾದ ಶ್ರೀಮತಿ ಎಸ್.ಐಶ್ವರ್ಯ ಮತ್ತು ಕು|ಎಸ್. ಸೌಂದರ್ಯ, ವಯೊಲಿನ್ ನಲ್ಲಿ ವಿದ್ವಾನ್ ಜನಾರ್ದನ್ ಶ್ರೀನಾಥ್, ಮೃದಂಗದಲ್ಲಿ ವಿದ್ವಾನ್ ಫಣೀಂದ್ರ ಭಾಸ್ಕರರವರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಡಾ.ಅಶೋಕ್ ಪಡಿವಾಳ್ ಮತ್ತು ಕುಟುಂಬಸ್ಥರು ವಹಿಸಿಕೊಂಡುರುತ್ತಾರೆ. ಸಂಗೀತಾಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಜರಾಗಿ ಕಲೆಯನ್ನು ಪ್ರೋತ್ಸಾಹಿಸಬೇಕಾಗಿ ಮಹಾಬಲ-ಲಲಿತ ಕಲಾ ಸಭಾದ ನಿರ್ದೇಶಕ ಡಾ.ಶ್ರೀಪ್ರಕಾಶ್ ಬಿ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದ ಸಮಯ
ಸಮಯ: ಸಂಜೆ 5.30 ರಿಂದ 9 ಗಂಟೆವರೆಗೆ
ಹೆಚ್ಚಿನ ಮಾಹಿತಿಗೆ ಡಾ.ಶ್ರೀಪ್ರಕಾಶ್ ಬಿ. 9448152893 ನಂಬರಿಗೆ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here