ಕುಂದ್ರುಕೋಟೆ ಮನೆಯಲ್ಲಿ ವ್ಯಕ್ತಿಯ ಕೊಳೆತ ಶವ ಪತ್ತೆ

0

ಪುತ್ತೂರು: ನಗರಸಭೆ ವ್ಯಾಪ್ತಿಯ ಕೊಡಿಪಾಡಿ ರಸ್ತೆಯ ಕುಂದ್ರುಕೋಟೆ ಮನೆಯೊಂದರಲ್ಲಿ ಮಾಜಿ ಪವರ್ ಮ್ಯಾನ್ ಒಬ್ಬರ ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಾ.25ರಂದು ರಾತ್ರಿ ಬೆಳಕಿಗೆ ಬಂದಿದೆ.

ಮಾಜಿ ಪವರ್ ಮ್ಯಾನ್ ಆಗಿರುವ ಕುಂದ್ರುಕೋಟೆ ನಿವಾಸಿ ಗಣೇಶ್ ಪೂಜಾರಿ(55ವ) ಎಂಬವರು ಮೃತಪಟ್ಟವರು. ಅವರ ಪತ್ನಿ ಮತ್ತು ಮಗ ಬೇರೆ ತಾಯಿ ಮನೆಯಲ್ಲಿ ವಾಸ್ತವ್ಯ ಹೊಂದಿದ್ದು, ಗಣೇಶ್ ಪೂಜಾರಿಯೊಬ್ಬರೆ ಮನೆಯಲ್ಲೇ ಒಬ್ಬಂಟಿಯಾಗಿ ವಾಸ್ತವ್ಯ ಹೊಂದಿದ್ದರು. ಮಾ.25ರಂದು ಸಂಜೆ ಮನೆಯ ಸುತ್ತ ವಾಸನೆ ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರ ಮಾಹಿತಿಯಂತೆ ಪೊಲೀಸರು ತೆರಳಿ ಪರಿಶೀಲಿಸಿದಾಗ ಗಣೇಶ್ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿ ಮೃತರ ಪತ್ನಿ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here