ಸುಳ್ಯ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಧೀಶಕ್ತಿ ಬಳಗದಿಂದ ತಾಳಮದ್ದಳೆ 

0

ಪುತ್ತೂರು: ಶ್ರೀ ಗುರು ರಾಘವೇಂದ್ರ ಮಠ, ಸುಳ್ಯ ಇದರ ಪ್ರತಿಷ್ಠಾ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಧೀಶಕ್ತಿ ಮಹಿಳಾ ಯಕ್ಷಬಳಗ ತೆಂಕಿಲ ಪುತ್ತೂರು ಇವರಿಂದ ತಾಳಮದ್ದಳೆ “ಭೀಮಾಂಜನೇಯ” ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ  ಅಮೃತಾ ಕೌಶಿಕ್, ಮದ್ದಳೆಯಲ್ಲಿ ಸತ್ಯನಾರಾಯಣ ಅಡಿಗ, ಚೆಂಡೆಯಲ್ಲಿ ಲಕ್ಷ್ಮೀಶ ಶಗ್ರಿತ್ತಾಯ ಸಹಕರಿಸಿದರು. ಮುಮ್ಮೇಳದಲ್ಲಿ, ಪದ್ಮಾ ಕೆ ಆರ್ ಆಚಾರ್ಯ(ಭೀಮ) ಜಯಲಕ್ಷ್ಮಿ ವಿ ಭಟ್(ದ್ರೌಪದಿ), ಹೀರಾ ಉದಯ್(ಆಂಜನೇಯ), ಸ್ವಪ್ನಾ ಉದಯ್ (ಕುಬೇರ) ಮಮತಾ ಪ್ರಕಾಶ್ ಸುಳ್ಯ (ವನಪಾಲಕ), ಅರ್ಥದಾರಿಗಳಾಗಿ ಪಾತ್ರ ನಿರ್ವಹಣೆ ಮಾಡಿದರು. ಪ್ರಕಾಶ್ ಮೂಡಿತ್ತಾಯ  ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಮಠದ ವತಿಯಿಂದ ಕಲಾವಿದರನ್ನು ಗೌರವಿಸಿದರು.

LEAVE A REPLY

Please enter your comment!
Please enter your name here